ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಇದುವರೆಗೂ ಚರ್ಚೆಯೇ ನಡೆದಿಲ್ಲ: ಸಚಿವ ಆರ್. ಅಶೋಕ್
ಬೆಂಗಳೂರು, ಆ.16: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಸಂಬಂಧ ಸಚಿವ ಸಂಪುಟ ಅಥವಾ ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ಗೆ ಮತ್ತೊಂದು ಹೆಸರು ಸೂಚಿಸುವ ಕಾರ್ಯ ನಡೆದಿಲ್ಲ. ಬದಲಾವಣೆ ಪ್ರಕ್ರಿಯೆಯೂ ಆರಂಭವಾಗಿಲ್ಲ ಎಂದು ತಿಳಿಸಿದರು.
ಯಾವುದೇ ಒಂದು ಸರಕಾರ ತನ್ನ ಯೋಜನೆಗೆ ಸಂಬಂಧಿಸಿದಂತೆ ಹೆಸರನ್ನು ನಾಮಕರಣ ಮಾಡುತ್ತದೆ. ಇನ್ನು, ಕೆಲ ಬಿಜೆಪಿ ನಾಯಕರು ಇಂದಿರಾ ಹೆಸರನ್ನು ಬದಲಾವಣೆ ಮಾಡಬೇಕೆಂದು ಚರ್ಚೆ ನಡೆಸುತ್ತಿದ್ದಾರೆ. ಆದರೆ, ಈ ಚರ್ಚೆಯೂ ಸರಕಾರದ ಮಟ್ಟದಲ್ಲಿ ನಡೆದಿಲ್ಲ. ಯಾರೇ ಆಗಲಿ ಈ ವಿಷಯ ಕುರಿತು ವಾದ, ಪ್ರತಿವಾದಗಳು ಒಳ್ಳೆಯದಲ್ಲ ಎಂದು ಅಶೋಕ್ ಹೇಳಿದರು.
Next Story