ರಾಜ್ಯ ಹೈಕೋರ್ಟ್ಗೆ ಆರು ಖಾಯಂ ನ್ಯಾಯಾಧೀಶರ ನೇಮಕ
ಬೆಂಗಳೂರು, ಆ.19: ಕರ್ನಾಟಕ ಹೈಕೋರ್ಟ್ನ ಆರು ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಅನುಮೋದಿಸಿದೆ.
ನ್ಯಾ.ನೇರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ, ಜ್ಯೋತಿ ಮೂಲಿಮನಿ, ನಟರಾಜ್ ರಂಗಸ್ವಾಮಿ, ಹೇಮಂತ್ ಚಂದನಗೌಡರ್, ಪ್ರದೀಪ್ ಸಿಂಗ್ ಯೆರೂರ್ ಮತ್ತು ಮಹೇಶನ್ ನಾಗಪ್ರಸನ್ನ ನೇಮಕಗೊಂಡಿರುವ ಖಾಯಂ ನ್ಯಾಯಾಧೀಶರು.
ಖಾಯಂ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಕರ್ನಾಟಕ ಹೈಕೋರ್ಟ್ನಿಂದ ಸುಪ್ರೀಂಕೋರ್ಟ್ ಕೊಲಿಜಿಯಂಗೆ ಮನವಿ ಮಾಡಲಾಗಿತ್ತು. ಮನವಿ ಹಿನ್ನೆಲೆಯಲ್ಲಿ ಬುಧವಾರ ಸಭೆ ನಡೆಸಿದ್ದ ಸುಪ್ರೀಂಕೋರ್ಟ್ ಕೊಲಿಜಿಯಂ ಹೆಚ್ಚುವರಿ ನ್ಯಾಯಾಧೀüಶರನ್ನು ಖಾಯಂ ಮಾಡಿ ಆದೇಶ ಹೊರಡಿಸಿದೆ.
Next Story