'ಅಫ್ಘಾನಿಸ್ತಾನಕ್ಕೆ ಹೋಗಲಿ' : ಅನಂತ್ನಾಗ್ ಹೇಳಿಕೆಗೆ ನಟ ಚೇತನ್ ಖಂಡನೆ
ಬೆಂಗಳೂರು, ಆ.19: ಭಾರತ ಸುರಕ್ಷಿತವಲ್ಲ ಎಂದಿದ್ದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದಿರುವ ಹಿರಿಯ ನಟ ಅನಂತ್ನಾಗ್ ಅವರ ಹೇಳಿಕೆಯನ್ನು ನಟ, ಚಿಂತಕ ಚೇತನ್ ಖಂಡಿಸಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇತಿಹಾಸ ಹಾಗೂ ಭೌಗೋಳಿಕ ರಾಜಕೀಯದ ಬಗ್ಗೆ ಅನಂತರ ಆಲೋಚನೆಗಳಲ್ಲಿ ಹಿಂಜರಿತ, ಸೀಮಿತ ಮತ್ತು ಪಂಥೀಯತೆ ಕಾಣುತ್ತವೆ. ಯಾವ ನಟರು ಇಲ್ಲಿ ಸುರಕ್ಷತೆ ಇಲ್ಲ ಎಂದು ಭಾವಿಸುವವರು, ಆ ‘ಸ್ವರ್ಗ’ಕ್ಕೆ (ಅಫ್ಘಾನಿಸ್ತಾನ) ಹೋಗಬಹುದು ಎಂದಿದ್ದಾರೆ. ಆದರೆ, ಸಹಿಷ್ಣುತೆಯು ಕ್ರೂರತೆಯನ್ನು ವಿಮರ್ಶಿಸುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಅನಂತ್ ಹೇಳಿದ್ದೇನು?: ಅನಂತ್ ನಾಗ್ ಅವರು ನಿನ್ನೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಇಲ್ಲಿ ಕೆಲವು ನಟರು ಹೇಳಿದ್ದಾರಲ್ಲ, ನಮಗೆ ಭದ್ರತೆ ಇಲ್ಲ, ಭಾರತದಲ್ಲಿ ಇರಲು ಭಯವಾಗುತ್ತಿದೆ ಎಂದೂ. ಅಂತಹವರು ಆರಾಮವಾಗಿ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿರಬಹುದು ಎಂದು ವಿವಾದಿತ ಹೇಳಿಕೆ ನೀಡಿದ್ದರು.
Next Story