ಹಾಸನ :ಮಹಿಳೆಯ ಕೊಲೆ
ಹಾಸನ : ಮಧ್ಯ ವಯಸ್ಸಿನ ಮಹಿಳೆಯನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಗರದ ಹೊರವಲಯದ ಹನುಮಂತ ಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹನುಮಂತಪುರದ ಸರಕಾರಿ ಶಾಲೆ ಎದುರು ಇರುವ ವಕ್ಕಲಿಗ ಜನಾಂಗದ ಸುಮಾರು 50 ವರ್ಷದ ಗೌರಮ್ಮ ಎಂಬವರೇ ಕೊಲೆಯಾದ ಮಹಿಳೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಾಸನ ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಗ್ರಾಮಾಂತರ ಠಾಣೆ ಇನ್ಸಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇನ್ನು ದಾಖಲಾಗಬೇಕಾಗಿದ್ದೆ. ಮೃತ ಮಹಿಳೆಯ ಗಂಡ ಈ ಹಿಂದೆ ಕೆಎಸ್ ಆರ್ ಟಿಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರ ಸಾವಿನ ಬಳಿಕ ಅದೇ ಕೆಲಸ ಮೃತ ಗೌರಮ್ಮನವರ ಮಗನಿಗೆ ದೊರಕಿದೆ.
ಗೌರಮ್ಮನವರು ಸಣ್ಣ ಪ್ರಮಾಣದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಯಾವ ವಿಚಾರಕ್ಕಾಗಿ ಕೊಲೆ ಆಗಿದೆ ಎಂಬುದು ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
Next Story