ಬೈಕ್ ಗಳ ಮುಖಾಮುಖಿ ಢಿಕ್ಕಿ: ಸ್ಥಳದಲ್ಲೇ ಮೂವರು ಮೃತ್ಯು
ಕಲಬುರಗಿ: ಪರಸ್ಪರ ಬೈಕ್ಗಳು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಕಮಲಾಪೂರ ತಾಲ್ಲೂಕಿನ ಮಟಕಿ ತಾಂಡಾದ ಬಳಿ ನಡೆದಿದೆ.
ಲಾಡಮುಗಳಿ ಗ್ರಾಮದ ನಿವಾಸಿಗಳಾದ ಅಂಬರೇಶ್ ಅಶೋಕ (24), ಅನೀಲ ಮಲ್ಲಯ್ಯ ಗುತ್ತೇದಾರ್ (26) ಹಾಗೂ ಕಲಬುರಗಿ ತಾಲೂಕಿನ ಬೆಲೂರು (ಜೆ) ಗ್ರಾಮದ ನಿವಾಸಿ ನಾಗೇಶ್ ಅಣ್ಣಪ್ಪ ವಡರ್ (24) ಮೃತರು ಎಂದು ಗುರುತಿಸಲಾಗಿದೆ.
ಬೆಲೂರು (ಜೆ) ಗ್ರಾಮದ ನಿವಾಸಿ ನಾಗೇಶ್ ಮುಕುಂದ (30) ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪರಸ್ಪರ ಬೈಕ್ಗಳು ಡಿಕ್ಕಿ ಹೊಡೆದಿವೆ. ಪರಿಣಾಮ, ತಲೆಗೆ ಪೆಟ್ಟಾಗಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story