ಸಿಎಂ ಪ್ರಯಾಣಿಸುವ ಒಂದೇ ಕಾರಣಕ್ಕೆ 50 ಕಡೆ ರಸ್ತೆ ಉಬ್ಬು ತೆರವು: ಕಾಂಗ್ರೆಸ್ ಆರೋಪ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಸಿಎಂ ಅಂದರೆ ಕಾಮನ್ ಮ್ಯಾನ್' ಎಂದಿದ್ದರು. ಆದರೆ ಈಗ ಸಿಎಂ ಪ್ರಯಾಣಿಸುವ ಒಂದೇ ಕಾರಣಕ್ಕೆ 50 ಕಡೆ ರಸ್ತೆಯ ಉಬ್ಬುಗಳನ್ನು ತೆಗೆಯಲಾಗಿದೆ. ಇದೇನಾ ಸರಳತೆ? ಎಂದು ಕಾಂಗ್ರೆಸ್ ಟೀಕಿಸಿದೆ.
ಶನಿವಾರ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, 'ಹಂಪ್ಸ್ ತೆಗೆಯಲು, ಹಾಕಲು ತಗುಲುವ ಖರ್ಚು ಅನಗತ್ಯವಲ್ಲವೇ? ಕಾಲ ಕಳೆದಂತೆಲ್ಲ ಸಿಎಂ ರವರ 'ಸರಳತೆ'ಯ ಬಣ್ಣ ತೊಳೆಯುತ್ತಿದೆ, ವಿಜೃಂಭಣೆಯ ಬಣ್ಣ ಮಿಂಚುತ್ತಿದೆ!' ಎಂದು ಹೇಳಿದೆ.
'ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರೈತರ ವಿಚಾರದಲ್ಲಿ ನಿರ್ಲಕ್ಷ್ಯ, ಉದಾಸೀನತೆ, ನಿದ್ರಾವಸ್ಥೆ 'ಮಂತ್ರ' ಪಾಲಿಸುತ್ತಿದೆ. ಅವರ ನಾಯಕರು ದೆಹಲಿಯಲ್ಲಿ ರೈತರನ್ನು ಹಿಂಸಿಸುತ್ತಿದ್ದು, ಅದನ್ನೇ ಇವರೂ ಅನುಸರಿಸುತ್ತಿದ್ದಾರೆ. ಈರುಳ್ಳಿ ಬೆಳೆಗಾರರ ಸಂಕಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಎಸ್ ಡಿಆರ್ಎಫ್ ಮೂಲಕ ಪರಿಹಾರ ನೀಡಿ' ಎಂದು ಒತ್ತಾಯಿಸಿದೆ.
CM ಅಂದರೆ Common man ಎಂದಿದ್ದರು @BSBommai ಅವರು.
— Karnataka Congress (@INCKarnataka) September 25, 2021
ಆದರೆ ಈಗ ಸಿಎಂ ಪ್ರಯಾಣಿಸುವ ಒಂದೇ ಕಾರಣಕ್ಕೆ 50 ಕಡೆ ರಸ್ತೆಯ ಹಂಪ್ಸ್ ತೆಗೆಯಲಾಗಿದೆ, ಇದೇನಾ ಸರಳತೆ?
ಹಂಪ್ಸ್ ತೆಗೆಯಲು, ಹಾಕಲು ತಗುಲುವ ಖರ್ಚು ಅನಗತ್ಯವಲ್ಲವೇ?
ಕಾಲ ಕಳೆದಂತೆಲ್ಲ ಸಿಎಂರವರ 'ಸರಳತೆ'ಯ ಬಣ್ಣ ತೊಳೆಯುತ್ತಿದೆ, ವಿಜೃಂಭಣೆಯ ಬಣ್ಣ ಮಿಂಚುತ್ತಿದೆ! pic.twitter.com/IuQdMWslnO