ಮಂಡ್ಯ: ಸೆಲ್ಫಿ ತೆಗೆಯುವಾಗ ನದಿಗೆ ಬಿದ್ದ ಪತ್ನಿ, ರಕ್ಷಿಸಲು ನದಿಗೆ ಹಾರಿದ ಪತಿ; ಮೀನುಗಾರರಿಂದ ರಕ್ಷಣೆ
ಮಂಡ್ಯ, ಅ.17: ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೆಆರ್ಎಸ್ ಬಳಿ ಕಾವೇರಿ ನದಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಪತಿಯೂ ನದಿಗೆ ಹಾರಿದ ಘಟನೆ ರವಿವಾರ ನಡೆದಿದ್ದು, ಮೀನುಗಾರರು ಇಬ್ಬರನ್ನೂ ರಕ್ಷಿಸಿದ್ದಾರೆ.
ಮೈಸೂರಿನ ಕೂರ್ಗಳ್ಳಿ ನಿವಾಸಿಗಳಾದ ಗಣೇಶ್ ಮತ್ತು ಆಶಾ ದಂಪತಿ ಕೆಆರ್ಎಸ್ ಡ್ಯಾಂ ವೀಕ್ಷಣೆಗೆ ತೆರಗಳಿದ್ದ ವೇಳೆ, ಡ್ಯಾಂನ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ಅಶಾ ಅಯತಪ್ಪಿ ನದಿಗೆ ಬಿದ್ದಿದ್ದಾರೆ.
ತಕ್ಷಣ ಪತ್ನಿಯನ್ನು ರಕ್ಷಿಸಲು ಪತಿ ಗಣೇಶ್ ಕೂಡ ನದಿಗೆ ಹಾರಿದ್ದಾರೆ.. ಇದನ್ನು ಗಮನಿಸಿದ ಮೀನುಗಾರರು ಸುಮಾರು 50 ಅಡಿ ಆಳದ ನದಿಗೆ ಇಳಿದು ಪತಿಪತ್ನಿಯನ್ನು ಹೊರತೆಗೆದು ರಕ್ಷಿಸಿದ್ದಾರೆ.
ಪತಿಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
Next Story