ಬಿಜೆಪಿಯವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ: ಪ್ರಿಯಾಂಕ್ ಖರ್ಗೆ
ಬಿಟ್ ಕಾಯಿನ್ ಹಗರಣ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ರಾಜಕೀಯ ನಾಯಕರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದು, ಬಿಜೆಪಿಯವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಟ್ ಕಾಯಿನ್ ಹಗರಣ ಗಂಭೀರ ವಿಷಯವಲ್ಲ ಮುಖ್ಯಮಂತ್ರಿ ಬೊಮ್ಮಾಯಿ ಹೇಳುತ್ತಿದ್ದಾರೆ, ಹಾಗಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಪೊಲೀಸರ ಪತ್ರಿಕಾ ಪ್ರಕಟನೆ ಏಕೆ? , ರಾತ್ರಿ 9ಕ್ಕೆ ಮಂತ್ರಿಗಳ ಪತ್ರಿಕಾಗೋಷ್ಠಿ ಏಕೆ? ಬಿಜೆಪಿಗರ ಸಿಡಿಮಿಡಿ ಏಕೆ? ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲವೇಕೆ? ಇವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣ ಗಂಭೀರ ವಿಷಯವಲ್ಲ - ಸಿಎಂ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 14, 2021
ಹಾಗಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ?
ಪೊಲೀಸರ ಪತ್ರಿಕಾ ಪ್ರಕಟಣೆ ಏಕೆ?
ರಾತ್ರಿ 9ಕ್ಕೆ ಮಂತ್ರಿಗಳ ಪತ್ರಿಕಾಗೋಷ್ಠಿ ಏಕೆ?
ಬಿಜೆಪಿಗರ ಸಿಡಿಮಿಡಿ ಏಕೆ?
ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲವೇಕೆ?
ಇವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ.