ಬೊಮ್ಮಾಯಿ ಬದಲಾವಣೆ ಧ್ವನಿಗೆ ಕಾರಣ ಯಾವುದು: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು, ನ. 29: `ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ಮೂರು ಮಂದಿ ಮುಖ್ಯಮಂತ್ರಿಗಳಾಗುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ, ನನ್ನ ಭವಿಷ್ಯ ನಿಜವಾಗುವಂತಿದೆ' ಎಂದು ಮಾಜಿ ಸಚಿವ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, `ಬಿ.ಎಸ್.ಯಡಿಯೂರಪ್ಪ ಅವರ ಪದಚ್ಯುತಿಯ ಕಾರಣ ಇನ್ನೂ ಪ್ರಶ್ನಾರ್ಥಕ, ಮತ್ತೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಬದಲಿಸುವ ಧ್ವನಿ ಎದ್ದಿದೆ, ಕಾರಣ ಯಾವುದು?' ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
`ಬಿಟ್ ಕಾಯಿನ್ ಹಗರಣವೇ? ಶೇ.40ರಷ್ಟು ಕಮಿಷನ್ ಹಗರಣವೇ? ಹಾಗೂ ಅಥವಾ ಆಂತರಿಕ ಬಂಡಾಯವೇ?' ಎಂದು ಪ್ರಿಯಾಂಕ್ ಖರ್ಗೆ, `ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗಲಿದ್ದಾರೆ' ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಉಲ್ಲೇಖಿಸಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿಯಿಂದ 3 ಮುಖ್ಯಮಂತ್ರಿಗಳಾಗುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ, ನನ್ನ ಭವಿಷ್ಯ ನಿಜವಾಗುವಂತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 29, 2021
ಶ್ರೀ ಬಿಎಸ್ವೈ ಅವರ ಪದಚ್ಯುತಿಯ ಕಾರಣ ಇನ್ನೂ ಪ್ರಶ್ನಾರ್ಥಕ, ಮತ್ತೀಗ ಬೊಮ್ಮಾಯಿಯವರನ್ನು ಬದಲಿಸುವ ಧ್ವನಿ ಎದ್ದಿದೆ, ಕಾರಣ ಯಾವುದು?
ಬಿಟ್ ಕಾಯಿನ್ ಹಗರಣವೇ?
40% ಕಮಿಷನ್ ಹಗರಣವೇ?
ಅಥವಾ ಆಂತರಿಕ ಬಂಡಾಯವೇ? pic.twitter.com/QUUGOfcofy