ಭಟ್ಕಳ: ಕೋಕ್ತಿನಗರ ನಾಗಬನದಲ್ಲಿ ಮಾಂಸ ಪತ್ತೆ; ದೂರು
ಭಟ್ಕಳ, ಜು.17: ಇಲ್ಲಿನ ಕೋಕ್ತಿನಗರದ ನಾಗಜಟಕ ಹಾಗೂ ಚೌಡಿ ದೇವಸ್ಥಾನದಲ್ಲಿ ಮಾಂಸವನ್ನು ತುಂಬಿಸಿಟ್ಟ ಕೈಚೀಲವೊಂದು ಪತ್ತೆಯಾಗಿದೆ. ಈ ಬಗ್ಗೆ ಹೊನ್ನಯ ಸಣ್ಣಗೊಂಡ ಎಂಬವರು ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ದೂರನ್ನು ನೀಡಿರುವ ಅವರು, ಕೋಕ್ತಿನಗರದ ತಮ್ಮ ವಠಾರದಲ್ಲಿರುವ ನಾಗಬನ ಹಾಗೂ ಚೌಡಿ ದೇವಸ್ಥಾನದಲ್ಲಿ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರವಿವಾರ ಬೆಳಗ್ಗೆ ಎಂದಿನಂತೆ ಪೂಜೆಗೆಂದು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಮಾಂಸ ಇರುವುದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ. ದುಷ್ಕರ್ಮಿಗಳು ಮಾಂಸ ಎಸೆಯುವುದರ ಮೂಲಕ ಧಾರ್ಮಿಕ ಕ್ಷೇತ್ರದ ಪಾವಿತ್ರಕ್ಕೆ ಧಕ್ಕೆ ಮಾಡಲಾಗಿದೆ ಎಂದು ಎಎಸ್ಪಿ ಅನೂಪ್ ಶೆಟ್ಟಿಯವರಿಗೆ ದೂರನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣನಾಯ್ಕ, ಸುನಿಲ್ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Next Story