ತರೀಕೆರೆ: ಅರಣ್ಯ ವಿಭಾಗದ ಎಸಿಎಫ್ ರತ್ನಪ್ರಭಾರಿಂದ ದಲಿತ ಅಧಿಕಾರಿಗೆ ಜಾತಿ ನಿಂದನೆ; ಬಿಎಸ್ಪಿ ಆರೋಪ
ಬಿಎಸ್ಪಿಯಿಂದ ಸುದ್ದಿಗೋಷ್ಠಿ
ಚಿಕ್ಕಮಗಳೂರು, ಜ.3: ಜಿಲ್ಲೆಯ ತರೀಕೆರೆ ಅರಣ್ಯ ವಿಭಾಗದ ಎಸಿಎಫ್ ರತ್ನಪ್ರಭಾ ಅವರು ದಲಿತ ಸಮುದಾಯದ ಅಧಿಕಾರಿ ವಿರುದ್ಧ ಜಾತಿ ನಿಂದನೆ ಮಾಡಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಆಡಿಯೋ ಹಿನ್ನೆಲೆಯಲ್ಲಿ ಎಸಿಎಫ್ ರತ್ನಪ್ರಭಾ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವುದರೊಂದಿಗೆ ಹುದ್ದೆಯಿಂದ ವಜಾ ಮಾಡಬೇಕೆಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿಎಫ್ ರತ್ನಪ್ರಭಾ ಅವರು ವಿದ್ಯಾವಂತರಾಗಿದ್ದು, ತಮ್ಮ ಇಲಾಖೆಯ ಮತ್ತೋರ್ವ ಸಿಬ್ಬಂದಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆಯಲ್ಲಿ ಅವರು ತಮ್ಮ ಕೈಗೆಳಗಿನ ಪರಿಶಿಷ್ಟ ಸಮುದಾಯದ ಅಧಿಕಾರಿ ಅಶ್ವಥ್ ಎಂಬವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜಾತಿ ಉಲ್ಲೇಖಿಸಿ ನಿಂದಿಸಿದ್ದಾರೆ. ಅವರು ಮಾತನಾಡಿದರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲ ಆಗಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಎಸಿಎಫ್ ರತ್ನಪ್ರಭಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುದುದು ಎಂದು ಎಚ್ಚರಿಸಿದರು.
ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿ ಎಂಬುದನ್ನು ಮರೆತು ರತ್ನಪ್ರಭಾ ಅವರು ತಮ್ಮ ಕೈಕೆಳಗಿನ ಪರಿಶಿಷ್ಟ ಜಾತಿಗೆ ಸೇರಿರುವ ಅಧಿಕಾರಿ ವಿರುದ್ಧ ಮಾತನಾಡಿರುವ ಆಡಿಯೋ ಸಂಭಾಷಣೆ ಕೇಳುವವರಿಗೆ ಮನಸ್ಸು ನೋಯುತ್ತದೆ. ಓರ್ವ ವಿದ್ಯಾವಂತ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಸ್ಥಾನಮಾನ ಮರೆತು ಪುರುಷ ಸಿಬ್ಬಂದಿಯೊಂದಿಗೆ ಮಾತನಾಡುವ ವೇಳೆ ತಮ್ಮ ಕೈಕೆಳಗಿನ ಅಧಿಕಾರಿ ವಿರುದ್ಧ ಮಾನ ಮರ್ಯಾದೆಗೂ ಅಂಜದೆ ಅಸಭ್ಯವಾಗಿ ಮಾತನಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ಮಹಿಳಾ ಅಧಿಕಾರಿಯಿಂದ ಅರಣ್ಯ ಇಲಾಖೆಯ ಘನತೆ ಹಾಳಾಗಲಿದ್ದು, ಜಾತಿವಾದಿ ಮನಸ್ಥಿತಿಯ ಅಧಿಕಾರಿಯಿಂದ ಇಲಾಖೆಯ ಇತರ ಸಿಬ್ಬಂದಿ ಹಾಗೂ ಸರಕಾರ ಉತ್ತಮ ಕೆಲಸ ನಿರೀಕ್ಷಿಸಲೂ ಸಾಧ್ಯವಿಲ್ಲ. ಕೂಡಲೇ ಈ ಅಧಿಕಾರಿ