ಕಲಬುರ್ಗಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಏಕೆ ನೇಮಿಸಿಲ್ಲ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು, ಜ. 16: `ನೀವು ಮುಖ್ಯಮಂತ್ರಿ ಆಗಿ ನಾಲ್ಕು ತಿಂಗಳಾಗಿದ್ದರೂ, ಕಲಬುರ್ಗಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ ಏಕೆ?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರವಿವಾರ ಟ್ವೀಟ್ ಮಾಡಿರುವ ಅವರು, `ಬಸವರಾಜ ಬೊಮ್ಮಾಯಿ ಅವರೇ, ಕಲಬುರ್ಗಿಯಲ್ಲಿ ಕಾಮಗಾರಿಗಳು ವಿಳಂಬವಾಗಿವೆ. ಅನುದಾನ ಕೊರತೆಯಾಗಿದೆ. ಪಕ್ಷದ ಹೆಸರಲ್ಲಿ ಭ್ರಷ್ಟಾಚಾರ ಮತ್ತು ಪೊಲೀಸರಿಂದ ವಸೂಲಿ ಮಿತಿ ಮೀರಿದೆ. ಅಧಿಕಾರಿಗಳು ಕೈಗೆ ಸಿಗದಾಗಿದ್ದರೆ ಡ್ರಗ್ಸ್ ಮತ್ತು ಮದ್ಯ ನೀರಿನಂತೆ ಹರಿಯುತ್ತಿವೆ' ಎಂದು ದೂರಿದ್ದಾರೆ.
ಶ್ರೀ @BSBommai ಅವರೇ, ಕಲಬುರ್ಗಿಯಲ್ಲಿ
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 16, 2022
-ಕಾಮಗಾರಿಗಳು ವಿಳಂಬವಾಗಿವೆ
-ಅನುದಾನ ಕೊರತೆಯಾಗಿದೆ
-ಪಕ್ಷದ ಹೆಸರಲ್ಲಿ ಭ್ರಷ್ಟಾಚಾರ & ಪೊಲೀಸರಿಂದ ವಸೂಲಿ ಮಿತಿ ಮೀರಿದೆ
-ಅಧಿಕಾರಿಗಳು ಕೈಗೆ ಸಿಗದಾಗಿದ್ದರೆ
-ಡ್ರಗ್ಸ್ & ಮಧ್ಯ ನೀರಿನಂತೆ ಹರಿಯುತ್ತಿವೆ
ನೀವು CM ಆಗಿ 4 ತಿಂಗಳಾಗಿದ್ದರೂ, ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ ಮಾಡಿಲ್ಲ ಯಾಕೆ?
Next Story