ನರಗುಂದ ಗಲಭೆ ಪ್ರಕರಣ; ಡಿವೈಎಸ್ಪಿ ಶಂಕರ್ ರಾಗಿ ವರ್ಗಾವಣೆ
ಗದಗ: ಜಿಲ್ಲೆಯ ನರಗುಂದ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಶಂಕರ್ ಎಂ. ರಾಗಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಬುಧವಾರ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಈಗನಗೌಡರ್ ವೈ.ಎಸ್. ಅವರು ನರಗುಂದ ಡಿವೈಎಸ್ಪಿ ಆಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ : ನರಗುಂದ ಗಲಭೆ ಪ್ರಕರಣ: ಇನ್ ಸ್ಪೆಕ್ಟರ್ ನಂದೀಶ್ವರ ಕುಂಬಾರ ಅಮಾನತು
ನರಗುಂದ ಪಟ್ಟಣದಲ್ಲಿ ಗಲಭೆ, ಅಮಾಯಕ ಯುವಕನ ಕೊಲೆ ಪ್ರಕರಣದ ಬಳಿಕ ನರಗುಂದ ಪೊಲೀಸ್ ಠಾಣೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನರಗುಂದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಿಪಿಐ ನಂದೀಶ್ವರ ಕುಂಬಾರ್ ಅವರನ್ನು ಅಮಾನತು ಮಾಡಿ ಬೆಳಗಾವಿ ಉತ್ತರ ವಿಭಾಗದ ಐಜಿಪಿ ಸತೀಶ್ ಕುಮಾರ್ ಅವರು ಆದೇಶಿಸಿದ್ದರು. ಇದೀಗ ಡಿವೈಎಸ್ಪಿ ಶಂಕರ್ ರಾಗಿ ವರ್ಗಾವಣೆಯಾಗಿದ್ದಾರೆ.
Next Story