ಸಿ.ಎಂ ಇಬ್ರಾಹೀಂ ಎಲ್ಲೇ ಇದ್ದರೂ ನನ್ನ ಸ್ನೇಹಿತ ಎಂದ ಸಿದ್ದರಾಮಯ್ಯ
ಫೈಲ್ ಚಿತ್ರ
ಬೆಂಗಳೂರು, ಫೆ. 3: `ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಅವರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಆತ ಪಕ್ಷ ಬಿಟ್ಟೂ ಎಲ್ಲೇ ಇದ್ದರೂ ನನ್ನ ಸ್ನೇಹಿತ' ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಇಬ್ರಾಹೀಂ ಕಾಂಗ್ರೆಸ್ ಪಕ್ಷ ಬಿಟ್ಟರೂ ನಾನು ಅವನ ಮನೆಗೆ ಹೋಗುತ್ತೇನೆ. ರಾಜಕೀಯ ಬೇರೆ, ವೈಯಕ್ತಿಕ ಬೇರೆ. ಅವನಿಗೆ ಕೋಪ ಕಡಿಮೆ ಆದ ಮೇಲೆ ಹೋಗಿ ಮಾತನಾಡುತ್ತೇನೆ. ಅವನು ಎಲ್ಲೇ ಇದ್ದರು ನನ್ನ ಸ್ನೇಹಿತ. ಅವನು ಬೇರೆ ಪಕ್ಷಕ್ಕೆ ಹೋದರೂ ನನಗೆ ಸ್ನೇಹಿತನಾಗೇ ಇರುತ್ತಾನೆ' ಎಂದು ತಿಳಿಸಿದರು.
`ಸಿ.ಎಂ.ಇಬ್ರಾಹೀಂ ಕಾಂಗ್ರೆಸ್ ಪಕ್ಷ ತ್ಯಜಿಸುವುದಿಲ್ಲ ಎಂಬ ವಿಶ್ವಾಸವಿದೆ. ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ನದಿ ಜೋಡಣೆ, ಹಿಜಾಬ್ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಾಳೆ ಸುದ್ದಿಗೋಷ್ಟಿ ಕರೆದಿದ್ದು ಅಲ್ಲೇ ಪ್ರತಿಕ್ರಿಯೆ ನೀಡುತ್ತೇನೆ' ಎಂದು ಅವರು ವಿವರಣೆ ನೀಡಿದರು.