ಮಣಿಪಾಲ ಹಗರಣ: ಮತ್ತೊಬ್ಬ ಆರೋಪಿ ಬಂಧನ
ಬೆಂಗಳೂರು, ಫೆ.3: ಮಣಿಪಾಲ್ ಗ್ರೂಪ್ನಿಂದ 75 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಿದ್ದ ಮಣಿಪಾಲ ವಂಚನೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಮಣಿಪಾಲ್ ಗ್ರೂಪ್ ಮತ್ತು ಅದರ ಸಂಸ್ಥೆಗಳಿಂದ ಹಣವನ್ನು ಲಪಟಾಯಿಸಲು ರಚನೆಯನ್ನು ರೂಪಿಸಲು ಸಹಾಯ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಗಿರೀಶ್ ಗುರುರಾಜ್ ಎಂದು ಗುರುತಿಸಲಾಗಿದೆ.
ಮಣಿಪಾಲ ವಂಚನೆ ಪ್ರಕರಣದ ರೂವಾರಿ ಎನ್ನಲಾದ ಸಂದೀಪ್ ಗುರುರಾಜ್ ಸಹೋದರ ಗಿರೀಶ್ ಗುರುರಾಜ್ ಪ್ರಕರಣದ 11ನೆ ಆರೋಪಿಯಾಗಿರುತ್ತಾನೆ. ಮಣಿಪಾಲ್ ಗ್ರೂಪ್ ಮತ್ತು ಅದರ ಭಾಗಗಳಿಂದ ಹಣ ಎಗರಿಸಲು ರಚನೆಯನ್ನು ರೂಪಿಸುವ ಕಾರ್ಯವನ್ನು ಗಿರೀಶ್ ಗುರುರಾಜ್ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
Next Story