ಮುಳಬಾಗಿಲು: ವಿರೋಧದ ನಡುವೆ ಯೇಸು ಕ್ರಿಸ್ತನ ಪ್ರತಿಮೆ ತೆರವು
ಮುಳಬಾಗಿಲು, ಫೆ.14: ಗೂಕುಂಟೆ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕು ದಂಡಾಧಿಕಾರಿ ಶೋಭಿತಾರವರು ಯೇಸು ಕ್ರಿಸ್ತನ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.
ಮುಳಬಾಗಿಲು ತಾಲೂಕಿನ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗೂಕುಂಟೆ ಗ್ರಾಮದಲ್ಲಿ ಸುಮಾರು 25 ವರ್ಷಗಳ ಹಿಂದಿನ ಯೇಸು ಕ್ರಿಸ್ತನ ಪ್ರತಿಮೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ತಾಲೂಕು ಆಡಳಿತ ಸುಮಾರು 200 ಪೊಲೀಸ್ ಪಡೆಗಳ ಸಹಾಯದಿಂದ ತೆರೆವುಗೊಳಿಸಿದರು.
Next Story