ಜಾಮೀನು ದೊರೆತರೂ ನಟ ಚೇತನ್ ಗೆ ಸೋಮವಾರದವರೆಗೆ ಬಿಡುಗಡೆಯಿಲ್ಲ?
ನಟ ಚೇತನ್
ಬೆಂಗಳೂರು: ನ್ಯಾಯಾಧೀಶರ ನಿಲುವಿನ ಕುರಿತು ಟೀಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ. ಆದರೆ ಜಾಮೀನು ದೊರೆತರೂ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನಟ ಚೇತನ್ ಇನ್ನೂ ಮೂರು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಗುತ್ತದೆ.
ನಾಳೆ ನಾಲ್ಕನೇ ಶನಿವಾರ ಆಗಿರುವುದರಿಂದ ಶ್ಯೂರಿಟಿ ಒದಗಿಸುವುದು ಸಾಧ್ಯವಾಗದಿದ್ದಲ್ಲಿ ಸೋಮವಾರ ತನಕವೂ ಚೇತನ್ಗೆ ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
Next Story