ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಫೆ.28: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೇ ಬೇರೆನೂ ಇಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ನಮ್ಮ ಪ್ರಶ್ನೆಗಳಿಗೆ ಕಾಂಗ್ರೆಸ್ನವರು ಇದುವರೆಗೂ ಉತ್ತರ ಕೊಟ್ಟಿಲ್ಲ, ಇಲ್ಲಿ ಪಾದಯಾತ್ರೆ ನಾಟಕ ಮಾಡುವ ಬದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಕಾಂಗ್ರೆಸ್ನ ಚಿದಂಬರಂ ಮತ್ತು ಡಿಎಂಕೆ ಸ್ಟಾಲಿನ್ ಅವರನ್ನು ಒಪ್ಪಿಸಿದರೇ ಮೇಕೆದಾಟು ಯೋಜನೆ ಜಾರಿ ಸುಲಭವಾಗುತ್ತದೆ ಎಂದು ತೀರುಗೇಟು ನೀಡಿದರು.
ತಮಿಳುನಾಡಿನ ಆಕ್ಷೇಪಣೆ ಇಲ್ಲ ಅಂದರೇ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತದೆ. ಅದನ್ನು ಬಿಟ್ಟು ಪಾದಯಾತ್ರೆ ಮಾಡಿದ್ರೆ ದೈಹಿಕ ಕಸರತ್ತು ಆಗುತ್ತದೆ ಎಂದ ಅವರು, ತಮಿಳುನಾಡು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗಿದೆ. ಅವರು ಗುಟುರು ಹಾಕಿದ್ರೇ ಸೋನಿಯಾಗಾಂಧಿ ಅಲರ್ಟ್ ಆಗ್ತಾರೆ. ಸೋನಿಯಾ ಗಾಂಧಿ ಮಾತು ಚಿದಂಬರಂ ತೆಗೆದುಹಾಕುವುದಿಲ್ಲ, ಚಿದಂಬರಂ ಒಂದು ಮಾತು ಹೇಳಿದ್ರೇ ಸ್ಟಾಲಿನ್ ಒಪ್ಪಿಕೊಳ್ತಾರೆ ಇದು ಸುಲಭ, ಆದರೆ, ಪಾದಯಾತ್ರೆ ಉದ್ದೇಶ ರಾಜಕಾರಣ ಬಿಟ್ಟು ಬೇರೆನೂ ಇಲ್ಲ ಎಂದರು.