ಫೋನ್ ಕರೆಯಿಂದ ಗಲಿಬಿಲಿಗೊಂಡ ಈಶ್ವರಪ್ಪ ಮೈಸೂರಿನಿಂದ ಬೆಂಗಳೂರಿನತ್ತ ತುರ್ತು ಪಯಣ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
ಮೈಸೂರು, ಎ.13: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದೂರವಾಣಿ ಕರೆಯೊಂದು ಬಂದ ತಕ್ಷಣ ಗಲಿಬಿಲಿಗೊಂಡ ಈಶ್ವರಪ್ಪ ದಿಢೀರನೆ ಮೈಸೂರಿನಿಂದ ಬೆಂಗಳೂರಿನತ್ತ ದೌಡಾಯಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವರ ವಿರುದ್ಧ ಉಡುಪಿಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಈ ನಡುವೆ ನಿನ್ನೆಯಿಂದ ಮೈಸೂರಿನಲ್ಲೆ ವಾಸ್ತವ್ಯ ಹೂಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ಬೆಳಿಗ್ಗೆ ಖಾಸಗಿ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದಂತೆ ಮೊಬೈಲ್ ಗೆ ದೂರವಾಣಿ ಕರೆಯೊಂದು ಬಂದಿದೆ. ಇದರಿಂದ ಸಾಕಷ್ಟು ಗಲಿಬಿಲಿಗೊಳಗಾದ ಸಚಿವ ಈಶ್ವರಪ್ಪ ಸುಮಾರು 15 ನಿಮಿಷಗಳ ಕಾಲ ಏಕಾಂಗಿಯಾಗಿ ಆತಂಕದಿಂದಲೇ ಮಾತನಾಡಿದ್ದಾರೆ.
ಫೋನ್ ಕರೆ ಬರುತ್ತಿದ್ದಂತೆ ಆತಂಕಿತರಾದ ಈಶ್ವರಪ್ಪ ಪೋನ್ ಕರೆ ಕಟ್ ಆಗುತ್ತಿದ್ದಂತೆ ಆತುರಾತುರವಾಗಿ ಕಾರನ್ನೇರಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
Next Story