ವಿರಾಜಪೇಟೆ: ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ
ಹಮೀದ್ - ಮೃತ ವ್ಯಕ್ತಿ
ಮಡಿಕೇರಿ ಏ.23 : ಬೇಟೆಗೆಂದು ಕಾಡಿಗೆ ಹೋದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ನಡೆದಿದೆ
ವೀರಾಜಪೇಟೆ ತಾಲೂಕಿನ ಗುಂಡಿಕೆರೆ ನಿವಾಸಿ ಹಮೀದ್ (35) ಎಂಬುವವರೇ ಗುಂಡೇಟಿಗೆ ಬಲಿಯಾದ ವ್ಯಕ್ತಿ.
ಹಮೀದ್ ಸೇರಿದಂತೆ ಮೂವರು ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರೆನ್ನಲಾಗಿದ್ದು, ಈ ಸಂದರ್ಭ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಜೊತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಟೆಗೆ ಹೋದವರಲ್ಲಿ ಇನ್ನಷ್ಟು ಜನರಿದ್ದಾರೆ ಎಂದು ಆರೋಪಿಸಿರುವ ಮೃತರ ಸಂಬಂಧಿಕರು, ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.
Next Story