ರಾಜ್ಯದಲ್ಲಿ ಕ್ರೈಸ್ತರಿಗೊಂದು ನಿಗಮ ಸ್ಥಾಪಿಸಿ: ಪ್ರಜ್ವಲ್ ಸ್ವಾಮಿ
ಬೆಂಗಳೂರು, ಎ.30: ರಾಜ್ಯ ಸರಕಾರವು ಜಾತಿಗೊಂದು ನಿಗಮವನ್ನು ಸ್ಥಾಪಿಸಿ, ಸಮುದಾಯದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ ಕ್ರೈಸ್ತರ ಅಭಿವೃದ್ಧಿಗಾಗಿ ನಿಗಮವೊಂದನ್ನು ಸ್ಥಾಪಿಸುವಂತೆ ಅಖಿಲ ಭಾರತ ಕ್ರೈಸ್ತ ಮಹಾಸಭಾದ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ತಿಳಿಸಿದ್ದಾರೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಸರಕಾರವು ಚರ್ಚ್ಗಳ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ಪ್ರೋಗ್ರಾಂ(ಸಿಡಿಪಿ) ಅನ್ನು ಸ್ಥಾಪಿಸಿದೆ. ಆದರೆ ಅನುದಾನದಲ್ಲಿ ಶೇ.30ರವರೆಗೂ ಕಮಿಷನ್ ವ್ಯವಹಾರ ನಡೆಯುತ್ತಿದೆ. ಬಹುತೇಕ ಅನುದಾನವು ದಳ್ಳಾಳಿಗಳ ಪಾಲಾಗುತ್ತಿದೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಕ್ರೈಸ್ತರ ಅಭಿವೃದ್ಧಿಗಾಗಿ ನಿಗಮವೊಂದನ್ನು ಸ್ಥಾಪಿಸಬೇಕು. ನಿಗಮಕ್ಕೆ ಅನುದಾನವನ್ನು ಬಿಡುಗಡೆ ಮಾಡಬೇಕು. ಇದರಿಂದ ರಾಜ್ಯದಲ್ಲಿ ಕ್ರೈಸ್ತರು ಅಭಿವೃದ್ಧಿ ಹೊಂದುತ್ತಾರೆ ಎಂದು ಅವರು ತಿಳಿಸಿದರು.
Next Story