ಶಾಸಕ ಯತ್ನಾಳ್ ಗೆ ನೋಟಿಸ್ ನೀಡ್ತೀರಾ? ತನಿಖೆ ಮಾಡ್ತೀರಾ?: ಬಿಜೆಪಿಯನ್ನು ಪ್ರಶ್ನಿಸಿದ ಯು.ಟಿ ಖಾದರ್
ಯು ಟಿ ಖಾದರ್
ಬೆಂಗಳೂರು: '2,500 ಕೋಟಿ ರೂ. ಕೊಡಿ, ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ದಿಲ್ಲಿಯಿಂದ ಬಂದವರು ಹೇಳಿದ್ದರು' ಎಂಬ ಬಿಜೆಪಿ ಶಾಸಕ ಯತ್ನಾಳ್ ಅವರ ಹೇಳಿಕೆಗೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಾಸಕ ಯತ್ನಾಳ್ ಗೆ ನೋಟಿಸ್ ನೀಡ್ತಿರಾ? ಅಥವಾ ತನಿಖೆ ಮಾಡ್ತೀರಾ ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
''ಪಿಎಸ್ ಐ ನೇಮಕಾತಿ ಹಗರಣದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಿಗೆ ಸರ್ಕಾರವೇ ಮುಂದೆ ನಿಂತು ನೋಟಿಸ್ ನೀಡಿತ್ತು. ಈಗ ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಹರಾಜು ದರವನ್ನ ಪ್ರಕಟಿಸಿದ್ದಾರೆ. ಈಗೇನು ತನಿಖೆ ಮಾಡ್ತೀರಾ? ನೋಟಿಸ್ ನೀಡ್ತಿರಾ? ಜನ ನಿಮ್ಮನ್ನ ಇನ್ನು ಸಹಿಸೋಲ್ಲ'' ಎಂದು ಎಚ್ಚರಿಕೆ ಯು.ಟಿ ಖಾದರ್ ನೀಡಿದ್ದಾರೆ.
ಪಿಎಸ್ ಐ ನೇಮಕಾತಿ ಹಗರಣದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಿಗೆ ಸರ್ಕಾರವೇ ಮುಂದೆ ನಿಂತು ನೋಟಿಸ್ ನೀಡಿತ್ತು.ಈಗ ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಹರಾಜು ದರವನ್ನ ಪ್ರಕಟಿಸಿದ್ದಾರೆ.@BJP4Karnataka ಈಗೇನು ತನಿಖೆ ಮಾಡ್ತೀರಾ? ನೋಟಿಸ್ ನೀಡ್ತಿರಾ?
— UT Khadér (@utkhader) May 6, 2022
ಜನ ನಿಮ್ಮನ್ನ ಇನ್ನು ಸಹಿಸೋಲ್ಲ.