21ನೆ ಶತಮಾನದ ಯಾಂತ್ರಿಕ ಯುಗದಲ್ಲಿ ಚರ್ಮ ಕುಶಲಕರ್ಮಿಗಳ ಬದುಕು, ಬವಣೆ ಪರಿಹಾರ ಕಾರ್ಯಕ್ರಮ
ಬೆಂಗಳೂರು, ಮೇ 16: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಅರಮನೆ ಮೈದಾನದಲ್ಲಿ 5 ದಿನಗಳ ಕಾಲ ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಮ್ಮಿಕೊಂಡಿದ್ದು, ಸೋಮವಾರ 21ನೆ ಶತಮಾನದ ಯಾಂತ್ರಿಕ ಯುಗದಲ್ಲಿ ಚರ್ಮ ಕುಶಲಕರ್ಮಿಗಳ ಬದುಕು, ಬವಣೆ ಪರಿಹಾರ ಈ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ನೋಡಲ್ ಏಜೆನ್ಸಿ ಡಾ.ಇ.ವೆಂಕಟಯ್ಯ, ನಾಡೋಜ ಗೋನಾಳ ಭೀಮಪ್ಪ, ಸಮುದಾಯ ಚಿಂತಕರು ಹಾಗೂ ಶಿಕ್ಷಣ ತಜ್ಞರು ವಿಷಯ ಮತ್ತು ಪರಿಹಾರಗಳ ಬಗ್ಗೆ ಅವಲೋಕನ ಮಾಡಿದರು.
Next Story