ಅಕ್ಷರ ತಿದ್ದುವ ಮಕ್ಕಳ ಕೈಯಲ್ಲಿ ತ್ರಿಶೂಲ, ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೊಡಿಸಿ: ಬಿಕೆ ಹರಿಪ್ರಸಾದ್
ಕೊಡಗಿನ ವಿದ್ಯಾ ಸಂಸ್ಥೆಯಲ್ಲಿ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿ ಪ್ರಕರಣ
ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತನ್ನ ಕಾರ್ಯಕರ್ತರಿಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲಾ ಆವರಣವೊಂದರಲ್ಲಿ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶವೊಂದರಲ್ಲಿ ಬಂದೂಕು ತರಬೇತಿ ನೀಡಿರುವ ವಿಚಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಅಕ್ಷರ ತಿದ್ದುವ ಎಳೆಯ ಮಕ್ಕಳ ಕೈಯಲ್ಲಿ ತ್ರಿಶೂಲ,ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೋಡಿಸಬೇಕು. ಮಡಿಕೇರಿಯ ಶಾಲೆಯೊಂದರಲ್ಲಿ ಬಜರಂಗದಳ ಗೂಂಡಾಪಡೆ ನಡೆಸಿದ ತರಬೇತಿ ಶಿಬಿರಕ್ಕೆ BJP ಶಾಸಕರುಗಳು ಮಾರ್ಗದರ್ಶಕರು,ರಾಜ್ಯಾಧ್ಯಕ್ಷ ಸಮರ್ಥಕ.! ಅಷ್ಟಕ್ಕೂ BJPಯ ಶಾಸಕರ ಮಕ್ಕಳು ಕಾಣಲೇ ಇಲ್ವಲಾ? ಬಹುಶಃ ಶಾಸಕರಾಗಲು ತರಬೇತಿ ಪಡೆಯುತ್ತಿರಬೇಕು'' ಎಂದು ಕಿಡಿಗಾರಿದ್ದಾರೆ.
ಅಕ್ಷರ ತಿದ್ದುವ ಎಳೆಯ ಮಕ್ಕಳ ಕೈಯಲ್ಲಿ ತ್ರಿಶೂಲ,ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೋಡಿಸಬೇಕು. ಮಡಿಕೇರಿಯ ಶಾಲೆಯೊಂದರಲ್ಲಿ ಬಜರಂಗದಳ ಗೂಂಡಾಪಡೆ ನಡೆಸಿದ ತರಬೇತಿ ಶಿಬಿರಕ್ಕೆ BJP ಶಾಸಕರುಗಳು ಮಾರ್ಗದರ್ಶಕರು,ರಾಜ್ಯಾಧ್ಯಕ್ಷ ಸಮರ್ಥಕ.!
— Hariprasad.B.K. (@HariprasadBK2) May 16, 2022
ಅಷ್ಟಕ್ಕೂ BJPಯ ಶಾಸಕರ ಮಕ್ಕಳು ಕಾಣಲೇ ಇಲ್ವಲಾ? ಬಹುಶಃ ಶಾಸಕರಾಗಲು ತರಬೇತಿ ಪಡೆಯುತ್ತಿರಬೇಕು.