''ಹೀಗೆ ಅವಮಾನ ಮಾಡಬಾರದಿತ್ತು ಸಾರ್...'': ಸಿಎಂ ಇಬ್ರಾಹಿಂ ಹೇಳಿಕೆಗೆ ಮಂಜಮ್ಮ ಜೋಗತಿ ಪ್ರತಿಕ್ರಿಯೆ
ಮಂಜಮ್ಮ ಜೋಗತಿ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಪದ್ಮಶ್ರಿ ಬಿ. ಮಂಜಮ್ಮ ಜೋಗತಿ ಪ್ರತಿಕ್ರಿಯಿಸಿದ್ದಾರೆ.
'ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ' ಎಂದು ಸಿ.ಎಂ. ಇಬ್ರಾಹಿಂ ರಾಯಚೂರಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಂಜಮ್ಮ ಜೋಗತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
''ನನ್ನ ತಂದೆ ಕೂಡ ಹಿಂಗೆ ಹೇಳಿದ್ರು-ಗಂಡಾಗಿದ್ರೆ ಕೆಲ್ಸ ಕೊಡುಸ್ತಿದ್ದೆ, ಹೆಣ್ಣಾಗಿದ್ರೆ ಮದ್ವಿ ಮಾಡಿಸ್ತಿದ್ದೆ, ಕುರುಡ ಕುಂಟ ಆಗಿದ್ರೆ ಮನಿಯಾಗ ಕೂಡ್ಸಿ ಊಟ ಹಾಕ್ತಿದ್ದೆ. ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮಗೆ. ಹೀಗೆ ಅವಮಾನ ಮಾಡಬಾರದಿತ್ತು ಸಾರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು!'' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ...: ಮಂಗಳಮುಖಿಯರಿಗೆ ಸರಕಾರ ಉತ್ತಮ ಶಿಕ್ಷಣ ನೀಡಬೇಕು: 'ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಮಾತಾ ಮಂಜಮ್ಮ
ನನ್ನ ತಂದೆ ಕೂಡ ಹಿಂಗೆ ಹೇಳಿದ್ರು-ಗಂಡಾಗಿದ್ರೆ ಕೆಲ್ಸ ಕೊಡುಸ್ತಿದ್ದೆ, ಹೆಣ್ಣಾಗಿದ್ರೆ ಮದ್ವಿ ಮಾಡಿಸ್ತಿದ್ದೆ, ಕುರುಡ ಕುಂಟ ಆಗಿದ್ರೆ ಮನಿಯಾಗ ಕೂಡ್ಸಿ ಊಟ ಹಾಕ್ತಿದ್ದೆ.
— ಬಿ.ಮಂಜಮ್ಮ ಜೋಗತಿ (@ManjammaJogathi) May 24, 2022
ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮಗೆ.
ಹೀಗೆ ಅವಮಾನ ಮಾತಾಡಬಾರದಿತ್ತು ಸಾರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು! https://t.co/FoRbYA2yK9