ಕೋಮುವಾದಿಗಳು ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ: ಎಚ್.ಸಿ ಮಹದೇವಪ್ಪ ಆಕ್ರೋಶ
ಪಠ್ಯ ಪರಿಷ್ಕರಣೆ ವಿವಾದ
ಬೆಂಗಳೂರು: 'ಕೋಮುವಾದಿ ದೇಶದ್ರೋಹಿಗಳು ಹುಲಿಯ ಹಾಲಿನಂತೆ ಘರ್ಜಿಸುವ ಪ್ರೇರಣೆ ನೀಡಬಲ್ಲ ಶಿಕ್ಷಣವನ್ನೇ ಭ್ರಷ್ಟಗೊಳಿಸಲು ಹೊರಟಿದ್ದು, ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, ''ಶಿಕ್ಷಣವು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು, ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು ಹೀಗಾಗಿ ಶಿಕ್ಷಣದ ಶಕ್ತಿಯನ್ನು ಅರಿತಿರುವ ಕೋಮುವಾದಿ ದೇಶದ್ರೋಹಿಗಳು, ಹುಲಿಯ ಹಾಲಿನಂತೆ ಘರ್ಜಿಸುವ ಪ್ರೇರಣೆ ನೀಡಬಲ್ಲ ಶಿಕ್ಷಣವನ್ನೇ ಭ್ರಷ್ಟಗೊಳಿಸಲು ಹೊರಟಿದ್ದು, ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ'' ಎಂದು ಕಿಡಿಗಾರಿದ್ದಾರೆ.
''ಮೋರಿ ನೀರು ಕುಡಿದವರು, ಘರ್ಜಿಸುತ್ತಾರೋ ಇಲ್ಲವೇ ರೋಗಗ್ರಸ್ಥರಾಗಿ ನರಳುತ್ತಾರೋ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು'' ಎಂದು ಹೇಳಿದ್ದಾರೆ.
ಶಿಕ್ಷಣವು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು, ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು
— Dr H.C.Mahadevappa (@CMahadevappa) May 26, 2022
ಹೀಗಾಗಿ ಶಿಕ್ಷಣದ ಶಕ್ತಿಯನ್ನು ಅರಿತಿರುವ ಕೋಮುವಾದಿ ದೇಶದ್ರೋಹಿಗಳು, ಹುಲಿಯ ಹಾಲಿನಂತೆ ಘರ್ಜಿಸುವ ಪ್ರೇರಣೆ ನೀಡಬಲ್ಲ ಶಿಕ್ಷಣವನ್ನೇ ಭ್ರಷ್ಟಗೊಳಿಸಲು ಹೊರಟಿದ್ದು, ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ
1/2 pic.twitter.com/KX1LozFXxx