ಕನ್ನಡ ಧ್ವಜ, ನಾಡಗೀತೆಗೆ ಅವಮಾನ: ರೋಹಿತ್ ಚಕ್ರತೀರ್ಥ ಗಡಿಪಾರಿಗೆ ಆಗ್ರಹಿಸಿ ಟ್ವಿಟರ್ ನಲ್ಲಿ #ನಾಡದ್ರೋಹಿ ಅಭಿಯಾನ
ಬೆಂಗಳೂರು: ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಮೇಲ್ಜಾತಿಗಳಿಂದ ತುಂಬಿದ್ದು ಪಠ್ಯಗಳನ್ನು ಕೇಸರೀಕರಣಗೊಳಿಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕನ್ನಡದ ಖ್ಯಾತ ಲೇಖಕರು ಸಾಹಿತಿಗಳು ಪಠ್ಯಗಳಿಂದ ತಮ್ಮ ಪಾಠಗಳನ್ನು ಕೈ ಬಿಡುವಂತೆ ಆಗ್ರಹಿಸಿದ್ದರು. ಇದೀಗ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥಗೆ ನಾಡದ್ರೋಹಿ ಎಂದು ಕರೆದು ಕನ್ನಡಿಗರು ಟ್ವಿಟರಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಈ ಹಿಂದೆ, ಕುವೆಂಪು, ದೇವನೂರು ಮಹಾದೇವ ಸೇರಿದಂತೆ ಕನ್ನಡ, ನಾಡ ಧ್ವಜ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಮತ್ತೆ ಮುನ್ನಲೆಗೆ ಬಂದಿದ್ದು, ಸಹಜವಾಗಿ ಚಕ್ರತೀರ್ಥ ವಿರುದ್ಧ ಆಕ್ರೋಶ ಬುಗಿಲೇಳುವಂತೆ ಮಾಡಿದೆ. ಇಂತಹ ವ್ಯಕ್ತಿಯೊಬ್ಬನಿಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನೇತೃತ್ವ ವಹಿಸಿರುವ ಕರ್ನಾಟಕ ಸರ್ಕಾರದ ಬಗ್ಗೆಯೂ ಅಪಸ್ವರ ಎದ್ದಿದೆ. ಕನ್ನಡದ ಪ್ರಮುಖ ಜಾತಿ ಮಠಾಧೀಶರುಗಳು ಈ ಕುರಿತು ಮಾತನಾಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ನಡುವೆ, ರೋಹಿತ್ ಚಕ್ರತೀರ್ಥರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ #ನಾಡದ್ರೋಹಿ ಹ್ಯಾಷ್ಟ್ಯಾಗ್ ಅನ್ನು ಟ್ವಿಟರಿನಲ್ಲಿ ಟ್ರೆಂಡ್ ಮಾಡಲಾಗಿದೆ. ಹಲವಾರು ಕನ್ನಡಿಗರು ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಪಠ್ಯ ವಿವಾದ ಸೇರಿದಂತೆ, ಕನ್ನಡದ ಅಸ್ಮಿತೆಗಳನ್ನು ಅವಮಾನಿಸಿದ್ದರೆನ್ನಲಾದ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜಿಸಿ, ಪಠ್ಯಗಳನ್ನು ಹಿಂದಿನಂತೆಯೇ ಮುಂದುವರೆಸುವಂತೆ ಹಾಗೂ ಚಕ್ರತೀರ್ಥರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.
“ಆತನ ಭಾಷೆ ಅಗ್ಗವಾಗಿದೆ, ಆಲೋಚನೆಗಳು ವಿಕೃತವಾಗಿವೆ, ಎರಡೂ ಆತನ ಅಂಕಣಗಳಲ್ಲಿ ಪ್ರತಿಫಲಿಸುತ್ತದೆ!! ಅಂತಹ ನಾಚಿಕೆಯಿಲ್ಲದ ವ್ಯಕ್ತಿಯು ಶಾಲೆಯ ಪಠ್ಯಕ್ರಮದ ವಿಷಯವನ್ನು ನಿರ್ಧರಿಸುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ !! ಕುವೆಂಪು ಮತ್ತು ಕರ್ನಾಟಕ ನಾಡಗೀತೆಯನ್ನು ಅವಮಾನಿಸಿದ ವ್ಯಕ್ತಿ ಕಂಬಿ ಹಿಂದೆ ಇಲ್ಲವೇ?” ಎಂದು ಅಮೃತ್ ಶೆಣೈ ಟ್ವೀಟ್ ಮಾಡಿದ್ದಾರೆ.
“ಹೆಚ್ಚಿನ ಲೇಖಕರು ತಮ್ಮ ಪಠ್ಯಗಳನ್ನು ಬಳಸಲು ಅನುಮತಿಯನ್ನು ಹಿಂಪಡೆದಿದ್ದಾರೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಂತಹ ಬಿಕ್ಕಟ್ಟನ್ನು ಕಂಡಿರಲಿಲ್ಲ” ಎಂದು ವಿನಯ ಶ್ರೀನಿವಾಸ ಪ್ರತಿಕ್ರಿಯಿಸಿದ್ದಾರೆ.
“ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು ಪ್ರಸ್ತಾಪಿಸಿದ ಪಾಠ ಬದಲಾವಣೆಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಸಮಿತಿಯನ್ನು ರದ್ದುಪಡಿಸಬೇಕು.” ಎಂದು ಆದರ್ಶ ಹುಂಚದಕಟ್ಟೆ ಟ್ವೀಟ್ ಮಾಡಿದ್ದಾರೆ.
ಈ ಕುರಿತ ಇನ್ನಷ್ಟು ಟ್ವೀಟ್ಗಳು ಇಲ್ಲಿವೆ.
@RohitMath ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು ಪ್ರಸ್ತಾಪಿಸಿದ ಪಾಠ ಬದಲಾವಣೆಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಸಮಿತಿಯನ್ನು ರದ್ದುಪಡಿಸಬೇಕು.@JnanendraAraga @CMofKarnataka @BCNagesh_bjp @BSBommai#ನಾಡದ್ರೋಹಿ#ArrestChakrateerta
— Adarsh Humchadakatte (@AdarshHumchada) May 31, 2022
#ನಾಡದ್ರೋಹಿ #Arrestchakrateerta pic.twitter.com/SBx50kWpOh
— ಕನ್ನಡಿಗ(@vinodgowda6112) May 31, 2022
ಆಧುನಿಕ ಕನ್ನಡ ಸಾಹಿತಿಗಳು ತಮ್ಮ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ನೋಡಬೇಕೆಂದು ಅತ್ಯುತ್ತಮ ಕೃತಿಗಳನ್ನು ರಚಿಸಿ, ಘನವಂತರಾಗಿದ್ದಾರೆ! ಅಂಥ ಕೃತಿ ಮತ್ತು ಕೃತಿಕಾರರ ಯೋಗ್ಯತೆ ಅರಿಯದ ಒಬ್ಬ ಟ್ಯೂಷನ್ ನೀಡುವ ವ್ಯಕ್ತಿ ಹಾಗೂ ಆತನ ಸಮರ್ಥನೆಗೆ ಇಡೀ ಸರ್ಕಾರದ ಜನ ನಿಂತಿರುವುದು ಅತ್ಯಂತ ಖಂಡನೀಯ!#ನಾಡದ್ರೋಹಿ#arrestchakrateerta
— ಮೂರ್ತಿ ಕನ್ನಡಿಗ (@murthygowda_15) May 31, 2022
#arrestChakrateerta #ನಾಡದ್ರೋಹಿ
— ಜೀವಪ್ಪ ಕನ್ನಡಿಗ (@jeevubp) May 31, 2022
ಅದೆಂತಾ ಜಾತಿ ಪ್ರೇಮ , ಅದೆಂತಾ ನಾಡ ದ್ರೋಹಿತನ, ತನ್ನ ಸಮುದಾಯದವರು ಬಿಟ್ಟು ಬೇರೆಯವರನ್ನು ತುಚ್ಚವಾಗಿ ಕಾಣುವ ಈ ಲಜ್ಜೆಗೆಟ್ಟ ವಕ್ರತೀರ್ಥಗೆ ಸರಿಯಾದ ಚಪ್ಪಲಿ ಸೇವೆಯ ಅಗತ್ಯ ತುಂಬಾ ಇದೆ. ನಾಡ ದ್ರೋಹಿಗಳನ್ನು ಮನ್ನಿಸುವ ಪ್ರಶ್ನೆಯೇ ಇಲ್ಲ..
#arrestchakrateerta #ನಾಡದ್ರೋಹಿ
— ಜೀವಪ್ಪ ಕನ್ನಡಿಗ (@jeevubp) May 31, 2022
ಬರೀ ವಜಾ ಮಾಡಿದ್ರೆ ಸಾಕ.. ಒದ್ದು ಜೈಲಿಗೆ ಹಾಕಬೇಕು. ಇವನು ಮಾಡಿರೋದು ಸಾಮಾನ್ಯ ಅವಮಾನ ಅಲ್ಲ. ಜಗದ ಕವಿ ಕುವೆಂಪು ಅವರಿಗೆ ಹಾಗೂ ಕನ್ನಡ ನಾಡ ಗೀತೆಗೆ.. ಜೈಲು ಶಿಕ್ಷೆ ಅನುಭವಿಸಲೇ ಬೇಕು. ಇನ್ನೊಮ್ಮೆ ಕನ್ನಡದ ವಿಷಯಕ್ಕೆ ಬರಬಾರದು ಹಾಗೆ ಮಾಡಬೇಕು. pic.twitter.com/1bezLqHkTJ
ನಾರಾಯಣ ಗುರು ಪಾಠಕ್ಕೆ ಕತ್ತರಿ
— ರಾಖೇಶ ಬೂದಿಹಾಳ (@BudihalRakhesh) May 31, 2022
ಗೌತಮ ಬುದ್ಧ ಕುರಿತ ಪದ್ಯಕ್ಕೆ ಕತ್ತರಿ
ಬಸವಣ್ಣ ಕುರಿತ ಪಾಠಕ್ಕೆ ಕತ್ತರಿ, ತಿರುಚುವಿಕೆ.
ಮನುಶ್ಯತ್ವ ಹೇಳುವ 'ಯುದ್ಧ' ಪಾಠಕ್ಕೆ ಕತ್ತರಿ.
ಭಗತ್ ಸಿಂಗ್ ಪಾಠಕ್ಕೆ ಕತ್ತರಿ
ಇವೇನಾ ಪಠ್ಯ ಪುಸ್ತಕ ಸಮಿತಿಯ ಘನಂದಾರಿ ಕೆಲಸಗಳು?#ನಾಡದ್ರೋಹಿ#ArrestChakrateerta pic.twitter.com/RCj8GwzJSy
His language is cheap, thoughts r perverted, both reflect in his Columns!!
— Amrith Shenoy ಅಮೃತ್ ಶೆಣೈ (@AmrithShenoyP) May 31, 2022
Such a shameless person is heading a comitee wich decides d content of School syllabus !!
Fello who insulted Kuvempu& Karnataka Nadageethe is not behind Bars ?
Shame!#ನಾಡದ್ರೋಹಿ#ArrestChakrateerta