''ಕ್ಷೇತ್ರದ ಹುಡುಕಾಟದಲ್ಲಿ ಸಿದ್ದರಾಮಯ್ಯ ಹೈರಾಣ'': ಬಿಜೆಪಿ
ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭಾರೀ ಅಭದ್ರತೆ ಕಾಡುತ್ತಿದೆ. ಕ್ಷೇತ್ರದ ಹುಡುಕಾಟದಲ್ಲಂತೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೈರಾಣಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, " ಎಲ್ಲಿ ಹೋದರೂ ತಮ್ಮವರೇ ಸೋಲಿಸುತ್ತಾರೆ ಎಂಬ ಭಯ ಸಿದ್ದರಾಮಯ್ಯ ಅವರನ್ನು ಈಕ್ಷಣಕ್ಕೂ ಕಾಡುತ್ತಿದೆ. ಸಿದ್ದರಾಮಯ್ಯನವರೇ ಇದೆಲ್ಲ ನೀವು ಮಾಡಿದ ಕರ್ಮದ ಫಲ. ದಲಿತ ನಾಯಕರನ್ನು ತುಳಿದು ಬೆಳೆದ ಪಾಪ, ನಿಮ್ಮನ್ನು ಕಾಡದೆ ಬಿಡುವುದಿಲ್ಲ'' ಎಂದು ಹೇಳಿದೆ.
'' ಒಂದು ಕಡೆಯಲ್ಲಿ ಡಿಕೆಶಿಯನ್ನು ಎದುರಿಸಬೇಕು, ಇನ್ನೊಂದು ಕಡೆಯಲ್ಲಿ ದಲಿತ ಸಿಎಂ ವಾದ ಮುಂದಿಡುತ್ತಿರುವ ಖರ್ಗೆ, ಪರಮೇಶ್ವರ್ ಅವರನ್ನು ಎದುರಿಸಬೇಕು. ಮತ್ತೊಂದೆಡೆ ಮುಂದಿನ ಬಾರಿಗೆ ಸುರಕ್ಷಿತ ಕ್ಷೇತ್ರವೂ ಅಂತಿಮವಾಗಿಲ್ಲ ಎನ್ನುವ ಭಯವೂ ಕಾಡುತ್ತಿದೆ'' ಎಂದು ಬಿಜೆಪಿ ಹೇಳಿದೆ.
ಸಿದ್ದರಾಮಯ್ಯನವರನ್ನು ಇತ್ತೀಚೆಗೆ ಭಾರೀ ಅಭದ್ರತೆ ಕಾಡುತ್ತಿದೆ.
— BJP Karnataka (@BJP4Karnataka) June 16, 2022
ಒಂದು ಕಡೆಯಲ್ಲಿ ಡಿಕೆಶಿಯನ್ನು ಎದುರಿಸಬೇಕು, ಇನ್ನೊಂದು ಕಡೆಯಲ್ಲಿ ದಲಿತ ಸಿಎಂ ವಾದ ಮುಂದಿಡುತ್ತಿರುವ ಖರ್ಗೆ, ಪರಮೇಶ್ವರ್ ಅವರನ್ನು ಎದುರಿಸಬೇಕು.
ಮತ್ತೊಂದೆಡೆ ಮುಂದಿನ ಬಾರಿಗೆ ಸುರಕ್ಷಿತ ಕ್ಷೇತ್ರವೂ ಅಂತಿಮವಾಗಿಲ್ಲ ಎನ್ನುವ ಭಯವೂ ಕಾಡುತ್ತಿದೆ.#ಬುರುಡೆರಾಮಯ್ಯ