'ಸಚಿವರು ಕೆಲಸವನ್ನೇ ಮಾಡ್ತಿಲ್ಲ' ಎಂಬ ರೇಣುಕಾಚಾರ್ಯರ ಮಾತನ್ನು ಒಪ್ಪುವಿರಾ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: 'ಕೆಲವು ಸಚಿವರು ಕೆಲಸವನ್ನೇ ಮಾಡ್ತಿಲ್ಲ' ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯರ ಮಾತನ್ನು ಒಪ್ಪುವಿರಾ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂದು ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆ ಮಾಡಿದೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ವ್ಯಾಪಾರಸೌಧದ 3ನೇ ಮಹಡಿಗೆ ಸೀಮಿತರಾಗಿದ್ದಾರೆ. ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸಚಿವರು ರಾಜೀನಾಮೆ ಕೊಡಬೇಕು. ಇದು ಬಿಜೆಪಿ ಶಾಸಕ ರೇಣುಕಾಚಾರ್ಯರ ಮಾತುಗಳು' ಎಂದು ಕಾಂಗ್ರೆಸ್ ತಿಳಿಸಿದೆ.
ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ 'ಕಲಹೊತ್ಸವ' ಮಾಡಬಹುದು, ಆ ಮಟ್ಟಿಗಿದೆ #BJPvsBJP ಕಲಹ. ಮಂತ್ರಿಗಳು ಕೆಲಸ ಮಾಡ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮಂತ್ರಿಗಳ ಮೇಲೆ ಬೊಂಬೆಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣ ಎಂದು ಹೇಳಿದೆ.
ಇತ್ತೀಚೆಗೆ ದಾವಣಗೆರೆಯಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ ' ನಮ್ಮ ಪಕ್ಷದಲ್ಲಿನ ಹಿರಿಯ ನಾಯಕರಿಗೆ ತ್ಯಾಗ ಮನೋಭಾವ ಕಡಿಮೆ. ಅವರೇ ಕುರ್ಚಿಗೆ ಅಂಟಿಕೊಂಡಿದ್ದಾರೆ. ಇನ್ನಾದ್ರು ಸ್ವಲ್ಪ ಕೆಲಸ ಮಾಡಿ' ಎಂದು ಹೇಳಿದ್ದರು.
ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ 'ಕಲಹೊತ್ಸವ' ಮಾಡಬಹುದು, ಆ ಮಟ್ಟಿಗಿದೆ #BJPvsBJP ಕಲಹ!
— Karnataka Congress (@INCKarnataka) July 19, 2022
ಮಂತ್ರಿಗಳು ಕೆಲಸ ಮಾಡ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಮಂತ್ರಿಗಳ ಮೇಲೆ #ಬೊಂಬೆಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣವಲ್ಲವೇ @BJP4Karnataka?