'ಅಯೋಧ್ಯೆಯಲ್ಲಿ ಬಿಜೆಪಿ ಪಕ್ಷವೇ ರಾಮನಿಗೆ ಮಾಡಿದ ಅವಮಾನ ಅಮಿತ್ ಶಾಗೆ ತಿಳಿಯಲಿಲ್ಲವೇ?': ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಆ.9: 'ಕಾಂಗ್ರೆಸ್ನ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ರಾಮನಿಗೆ ಅವಮಾನ ಆಗಿದೆ ಎಂದು ಸಂಬಂಧವೇ ಇಲ್ಲದ ವಿಷಯಕ್ಕೆ ಸಂಬಂಧ ಕಲ್ಪಿಸಿದ ಅಮಿತ್ ಶಾ (Amit Shah) ಅವರಿಗೆ ಅವರ ಪಕ್ಷವೇ ಮಾಡಿದ ಈ ನೈಜ ಅವಮಾನ ತಿಳಿಯಲಿಲ್ಲವೇ?' ಎಂದು ಕಾಂಗ್ರೆಸ್ (Congress) ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ 'ಕರ್ನಾಟಕ ಕಾಂಗ್ರೆಸ್', ರಾಮಜನ್ಮ ಭೂಮಿಯನ್ನು 'ಬಿಜೆಪಿಯ ಭ್ರಷ್ಟಜನ್ಮಭೂಮಿ'ಯಾಗಿನ್ನಾಗಿಸಿದ್ದು ಸಮಸ್ತ ರಾಮಭಕ್ತರಿಗೆ ಹಾಗೂ ರಾಮನಿಗೆ ಮಾಡಿದ ಅವಮಾನ ಎಂದು ಕಿಡಿಗಾರಿದೆ.
''ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ. ಇವೇ ಬಿಜೆಪಿ ಅಸಲಿ ಗುಣ. ಅಯೋಧ್ಯೆಯಲ್ಲಿ ಶಾಸಕ ಸೇರಿದಂತೆ ಬಿಜೆಪಿಯ 40 ಮಂದಿ ಅಕ್ರಮ ಭೂವ್ಯವಹಾರ ನಡೆಸಿದ್ದು ಹಿಂದೂ ಧರ್ಮಕ್ಕೆ ಎಸಗಿದ ಮಹಾದ್ರೋಹ. ಮರ್ಯಾದೆ ಬಿಟ್ಟಿರುವ ಬಿಜೆಪಿ ಮರ್ಯಾದಾ ಪುರುಷೋತ್ತಮನ ಮರ್ಯಾದೆ ಕಳೆಯುತ್ತಿರುವುದಕ್ಕೆ ರಾಮ ಎಂದಿಗೂ ಕ್ಷಮಿಸುವುದಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಅಕ್ರಮ ನಿವೇಶನ ಮಾರಾಟ: ಬಿಜೆಪಿ ಶಾಸಕ ಸೇರಿದಂತೆ 40 ಮಂದಿ ವಿರುದ್ಧ ಆರೋಪ
ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ. ಇವೇ @BJP4Karnataka ಅಸಲಿ ಗುಣ.
— Karnataka Congress (@INCKarnataka) August 9, 2022
ಅಯೋಧ್ಯೆಯಲ್ಲಿ ಶಾಸಕ ಸೇರಿದಂತೆ ಬಿಜೆಪಿಯ 40 ಮಂದಿ ಅಕ್ರಮ ಭೂವ್ಯವಹಾರ ನಡೆಸಿದ್ದು ಹಿಂದೂ ಧರ್ಮಕ್ಕೆ ಎಸಗಿದ ಮಹಾದ್ರೋಹ.
ಮರ್ಯಾದೆ ಬಿಟ್ಟಿರುವ ಬಿಜೆಪಿ
ಮರ್ಯಾದಾ ಪುರುಷೋತ್ತಮನ ಮರ್ಯಾದೆ ಕಳೆಯುತ್ತಿರುವುದಕ್ಕೆ ರಾಮ ಎಂದಿಗೂ ಕ್ಷಮಿಸುವುದಿಲ್ಲ.