'ಕಾಶ್ಮೀರ ಫೈಲ್ಸ್' ಗೆ ಉಚಿತ ಟಿಕೆಟ್ ಹಂಚಲು ಕೊಟ್ಟ ಮಹತ್ವ, ತ್ರಿವರ್ಣ ಧ್ವಜಕ್ಕೆ ಯಾಕಿಲ್ಲ?: ಬಿ.ಕೆ ಹರಿಪ್ರಸಾದ್
ಬೆಂಗಳೂರು: 'ಕೇಂದ್ರದ ಮೋದಿ ಸರ್ಕಾರ ವಸೂಲಿಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ. ಕಳಪೆ ಗುಣಮಟ್ಟದ ತ್ರಿವರ್ಣ ಧ್ವಜವನ್ನ ಮಾರಾಟ ಮಾಡಿ, ಬಾವುಟಕ್ಕೆ ಅವಮಾನ ಮಾಡುವುದೇ ಸಂಘ ಪರಿವಾರದ ಹಿಡನ್ ಅಜೆಂಡಾ..! ತಿರಂಗಾ ಅಪಶಕುನ ಎಂದು ಘೋಷಿಸಿದ್ದ ವಾರಸುದಾರರ ಪಡೆ ಇಂದು ದೇಶದ ಅಸ್ಮಿತೆಗೆ ಮಸಿ ಬಳಿಯುತ್ತಿದ್ದಾರೆ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಪ್ರಧಾನಿ ಮೋದಿಯವರಿಂದ ಹಿಡಿದು ಬಿಜೆಪಿ ಕಾರ್ಯಕರ್ತರು ಕೂಡ ಕಾಶ್ಮೀರ ಫೈಲ್ಸ್ ಫಿಲ್ಮ್ ಪ್ರಮೋಷನ್ ಗೆ ತೋರಿಸಿದ ಕಾಳಜಿ, ಉಚಿತವಾಗಿ ಟಿಕೆಟ್ ಹಂಚಲು ಕೊಟ್ಟ ಮಹತ್ವ, ತ್ರಿವರ್ಣ ಧ್ವಜಕ್ಕೆ ಯಾಕಿಲ್ಲ? ಧ್ವಜದ ಹೆಸರಿನಲ್ಲಿ ವಸೂಲಿ ಮಾಡುವುದನ್ನ ಬಿಟ್ಟು ಉಚಿತವಾಗಿಯೇ ಹಂಚಬಹುದಿತ್ತಲ್ವಾ? ತ್ರಿವರ್ಣ ಧ್ವಜದಲ್ಲಿಯೂ ಭ್ರಷ್ಟಾಚಾರ ಮಾಡುವ ನೀಚತನವೇ?'' ಎಂದು ಕಿಡಿಗಾರಿದ್ದಾರೆ.
ಇದನ್ನೂ ಓದಿ... ಬಾಬ್ರಿ ಮಸೀದಿ ಮಾದರಿಯಲ್ಲಿ ಚಾಮರಾಜಪೇಟೆ ಈದ್ಗಾ ಗೋಡೆ ಕೆಡಹುವ ಹೇಳಿಕೆ: ಸನಾತನ ಪರಿಷತ್ತು ಅಧ್ಯಕ್ಷನ ವಿರುದ್ಧ FIR
''ಕಮಿಷನ್ ಪಡೆಯದೇ ಯಾವ ಕೆಲಸವೂ ಮಾಡಬೇಡಿ ಎಂದು ಸಂಘ ಫತ್ವಾ ಹೊರಡಿಸಿದ್ಯಾ? ನಿಮ್ಮ ನಕಲಿ ದೇಶಪ್ರೇಮ ಇತಿಹಾಸದ ಪುಟದಲ್ಲಿ ದಾಖಲಾಗಿದೆ,ಹೊಸ ವರಸೆಗಳು ವರ್ಕೌಟ್ ಆಗುವುದಿಲ್ಲ. ಇಂತಹ ಟೂಲ್ ಕಿಟ್ ಗಳ ಭ್ರಮೆಗಳಿಂದ ಮೊದಲು ಹೊರಬಂದು ದೇಶದ ಎದುರು ಕ್ಷಮೆ ಕೇಳಿ. ಈ ದೇಶ ಉಳಿಯುವುದು ಅಸಲಿ ದೇಶಪ್ರೇಮಿಗಳಿಂದ ಹೊರತು, ನಕಲಿ ದೇಶಪ್ರೇಮಿಗಳಿಂದಲ್ಲ'' ಎಂದು ಟ್ವೀಟಿಸಿದ್ದಾರೆ.
ಪ್ರಧಾನಿ ಮೋದಿಯವರಿಂದ ಹಿಡಿದು ಬಿಜೆಪಿ ಕಾರ್ಯಕರ್ತರು ಕೂಡ ಕಾಶ್ಮೀರ ಫೈಲ್ಸ್ ಫಿಲ್ಮ್ ಪ್ರಮೋಷನ್ ಗೆ ತೋರಿಸಿದ ಕಾಳಜಿ, ಉಚಿತವಾಗಿ ಟಿಕೆಟ್ ಹಂಚಲು ಕೊಟ್ಟ ಮಹತ್ವ, ತ್ರಿವರ್ಣ ಧ್ವಜಕ್ಕೆ ಯಾಕಿಲ್ಲ?
— Hariprasad.B.K. (@HariprasadBK2) August 9, 2022
ಧ್ವಜದ ಹೆಸರಿನಲ್ಲಿ ವಸೂಲಿ ಮಾಡುವುದನ್ನ ಬಿಟ್ಟು ಉಚಿತವಾಗಿಯೇ ಹಂಚಬಹುದಿತ್ತಲ್ವಾ?
ತ್ರಿವರ್ಣ ಧ್ವಜದಲ್ಲಿಯೂ ಭ್ರಷ್ಟಾಚಾರ ಮಾಡುವ ನೀಚತನವೇ?3/4