ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಸನ್ಮಾನ
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ
ಬಾಗಲಕೋಟೆ , ಆ.9: " ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬೀಳಗಿ ತಾಲೂಕಿನ ಸುನಗಾ ಗ್ರಾಮದ ಲಕ್ಷ್ಮಪ್ಪಾ ಭರಮಪ್ಪಾ ದೊಡಮನಿ ಅವರನ್ನು ಜಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಮಂಗಳವಾರ ಸನ್ಮಾನಿಸಿ, ಗೌರವಿಸಿದರು.
ಭಾರತ ಮಾತೆಯ 75 ನೇ ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ದೊಡಮನಿ ಅವರ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ, ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶ, ಯೋಧರ ತ್ಯಾಗ ಬಲಿದಾನ ಕುರಿತು ಕುತೂಹಲದಿಂದ ಆಲಿಸಿದ ಬಳಿಕ ಅವರನ್ನು ಜಿಲ್ಲಾಧಿಕಾರಿ ಆತ್ಮೀಯವಾಗಿ ಸನ್ಮಾನಿಸಿದರು.
ಅದೆ ರೀತಿ ಜಮಖಂಡಿ ತಾಲೂಕಿನ ಕುಂಚನೂರ ಹಾಗೂ ಗಣಿ ಗ್ರಾಮದ ಹೋರಾಟಗಾರರಾದ ಗೋವಿಂದಪ್ಪ ತಿಪ್ಪಣ್ಣ ಸಂಗಾಪೂರ ಮತ್ತು ಶ್ರೀಮಂತಯ್ಯಾ ರಾಮಯ್ಯ ಮಠಪತಿ ಹಾಗೂ ಐನಾಪೂರ ಗ್ರಾಮದ ಸಿದ್ರಾಮ ಲಕ್ಷ್ಮಣ ಕೆಂಗಾರ ಅವರನ್ನು ಜಮಖಂಡಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಅವರು ಹೋರಾಟಗಾರರನ್ನು ಹಾರ ತುರಾಯಿಗಳಿಂದ ಗೌರವಿಸಿ ಸನ್ಮಾನಿಸಿದರು.
ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿ ಸೇರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.