ಸರ್ಕಾರ ನಡೆಯುತ್ತಿಲ್ಲ ಎಂದ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಮುನಿರತ್ನ
ಕೋಲಾರ: 'ಮಾಧುಸ್ವಾಮಿ ಅವರು ಮೊದಲು ರಾಜೀನಾಮೆ ಕೊಡಲಿ, ಬಳಿಕ ಮಾತನಾಡಲಿ' ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದ ವಿರುದ್ಧ ಅವರು ಮಾತನಾಡಿದ್ದು ಹೌದಾದರೆ ,ಮೊದಲು ಅವರು ರಾಜೀನಾಮೆ ಕೊಡಲಿ ಎಂದು ಆಕ್ರೋಸ ವ್ಯಕ್ತಪಡಿಸಿದರು.
''ಸಚಿವ ಸಂಪುಟದ ಎಲ್ಲಾ ನಿರ್ಧಾರಗಳಲ್ಲಿ ಅವರೂ ಭಾಗಿಯಾಗುತ್ತಾರೆ. ಪ್ರತಿ ವಿಷಯ ಕುರಿತು ಚರ್ಚಿಸುತ್ತಾರೆ. ಸರ್ಕಾರ ನಡೆಯುತ್ತಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರೆ ಅದರಲ್ಲಿ ಅವರೂ ಪಾಲುದಾರರಾಗುತ್ತಾರೆ, ಆ ಹೇಳಿಕೆ ಅವರಿಗೂ ಅನ್ವಯಿಸುತ್ತದೆ. ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ' ಎಂದರು.
Next Story