ಚಾಮರಾಜನಗರ; ಚಿಕ್ಕಲ್ಲೂರು ಪಂಕ್ತಿ ಸೇವೆಗೆ ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತ್ಯು
ಚಾಮರಾಜನಗರ : ಧಾರ್ಮಿಕ ಕ್ಷೇತ್ರವಾದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿಗೆ ಪಂಕ್ತಿ ಸೇವೆಗೆ ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದ ಸುನೀಲ್ (26) ಹಾಗೂ ಚಂದ್ರು(19) ಮೃತರು ಎಂದು ಗುರುತಿಸಲಾಗಿದೆ.
ಲಿಂಗಪಟ್ಟಣ ಗ್ರಾಮದ 30 ಜನರ ತಂಡದೊಂದಿಗೆ ಪಂಕ್ತಿ ಸೇವೆಗೆ ಬಂದಿದ್ದ ಈ ಇಬ್ಬರು ಯುವಕರು ದೇವರ ದರ್ಶನ ಪಡೆದು, ಪಂಕ್ತಿ ಸೇವೆ ತಡವಾಗುವ ಬಗ್ಗೆ ತಿಳಿದುಕೊಂಡು ಹೊಸಮಠದ ಮುಂಭಾಗವಿರುವ ಚೆಕ್ ಡ್ಯಾಂಗೆ ಈಜಲು ತೆರಳಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.
ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಮಹಜರ್ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story