ಚನ್ನಗಿರಿ: ಯುವಕನ ಜೊತೆ ವಿವಾಹಿತ ಮಹಿಳೆ ಆತ್ಮಹತ್ಯೆ
ಚನ್ನಗಿರಿ : ವಿವಾಹಿತ ಮಹಿಳೆ ಮತ್ತು ಯುವಕ ಕೆರೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಂಕಿಕೆರೆಯಲ್ಲಿ ನಡೆದಿದೆ.
ಬೆಂಗಳೂರಿನ ರಾಜಗೋಪಾಲ್ ನಗರದ ನಿವಾಸಿ ನಾಗರತ್ನ (21), ಪಿ.ಚರಣ್ (22) ಮೃತರು ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಇವರಿಬ್ಬರ ಶವಗಳು ಗುರು ವೀರ ಬೆಂಕಿಕೆರೆಯಲ್ಲಿ ಪತ್ತೆಯಾಗಿದೆ.
ನಾಗರತ್ನ ಆಧಾರ್ ಕಾರ್ಡ್ ಮಾಡಿಕೊಡುವ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಚರಣ್ ಎಂಬ ವ್ಯಕ್ತಿ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಆಧಾರ್ ಕಾರ್ಡ್ ಮಾಡಿಸಲು ಏಳು ತಿಂಗಳ ಹಿಂದೆ ಬಂದಾಗ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು ಎನ್ನಲಾಗಿದೆ.
ರಾಜಗೋಪಾಲ್ ನಗರದ ನಿವಾಸಿ ಪ್ರಸನ್ನ ಜತೆ ನಾಗರತ್ನ ಮದುವೆಯಾಗಿದ್ದರು. ನಾಗರತ್ನ ಪತಿ ಪ್ರಸನ್ನ ಬಸವೇಶ್ವರ ನಗರದ ಟಿವಿಎಸ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಅಂಗಡಿಗೆ ಹೋಗಿದ್ದ ಹೆಂಡತಿ ಮನೆಗೆ ಬಾರದ ಕಾರಣ ಗಂಡ ಪ್ರಸನ್ನ ತನ್ನ ಹೆಂಡತಿ ನಾಗರತ್ನ ಕಾಣೆಯಾಗಿದ್ದಾಳೆಂದು ರಾಜಗೋಪಾಲ್ ನಗರದ ಠಾಣೆಗೆ ಮಿಸ್ಸಿಂಗ್ ದೂರು ನೀಡಿದ್ದಾರೆ. ಅಲ್ಲದೇ ಹೆಂಡತಿ ಚರಣ್ ಎಂಬುವರ ಜೊತೆ ಆಗಾಗ ಮಾತನಾಡುತ್ತಿದ್ದು, ಆಕೆಯ ಸ್ನೇಹಿತ ಕೂಡ ಕಾಣೆಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.
ವೇಲ್ ಕಟ್ಟಿಕೊಂಡು ಆತ್ಮಹತ್ಯೆ: ವಿವಾಹಿತೆ ನಾಗರತ್ನ ಹಾಗೂ ಚರಣ್ ಇಬ್ಬರು ಪಲ್ಸರ್ ಬೈಕಿನಲ್ಲಿ ಬೆಂಗಳೂರಿನಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿ ಕೆರೆಗೆ ಬಂದು, ಇಲ್ಲಿ ಇಬ್ಬರು ಎರಡು ದಿನ ಕಾಲ ಕಳೆಯುತ್ತಾರೆ. 22 ವರ್ಷದ ಯುವಕ ಪಿ.ಚರಣ್ ಉನ್ನತ ಮದುವೆ ಆಗಿರಲಿಲ್ಲ. ನಾಗರತ್ನಗೆ ವಿವಾಹವಾಗಿದ್ದರಿಂದ ಪೋಷಕರು, ಗಂಡನಿಂದ ತೊಂದರೆಯಾಗಬಹುದು, ನಮ್ಮ ಪ್ರೀತಿ ಒಪ್ಪುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ವೇಲಿನಿಂದ ಇಬ್ಬರು ಕೈ ಕಟ್ಟಿಕೊಂಡು ನೀರಿನಲ್ಲಿ ಬೀದಿದ್ದಾರೆ. ಎರಡು ದಿನಗಳ ಬಳಿಕ ದೇಹ ನೀರಿನಲ್ಲಿ ತೇಲುತ್ತದೆ. ನಂತರ ವಿಷಯವನ್ನು ಸಂಬಂಧಿಕರಿಗೆ ತಿಳಿಸುತ್ತಾರೆ. ಸದ್ಯ ಮೃತ ದೇಹ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿದೆ. ತನಿಖೆ ಮುಂದುವರಿದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
------
ಬೆಂಗಳೂರಿನ ರಾಜಗೋಪಾಲ್ ನಗರದಲ್ಲಿ ನಾಗರತ್ನ, ಚರಣ್ ಎಂಬುವರ ಬಗ್ಗೆ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದು, ಇವರಿಬ್ಬರಿಗೂ ಪ್ರೇಮ ಸಂಬಂಧವಿತ್ತು. ಚನ್ನಗಿರಿಯ ಬೆಂಕಿಕೆರೆಯಲ್ಲಿ ಈ ಇಬ್ಬರ ಶವ ಪತ್ತೆಯಾಗಿವೆ.
- ರಿಷ್ಯಂತ್, ದಾವಣಗೆರೆ ಎಸ್ಪಿ.