ಕಮಿಷನ್ ದಂಧೆಯನ್ನೂ ಕೂಡಾ ಇವರು ದೇಶಭಕ್ತಿ ಎಂದು ವಾದಿಸಿದರೆ ಅಚ್ಚರಿ ಏನಿಲ್ಲ: BJP ವಿರುದ್ಧ ಎಚ್.ಸಿ ಮಹದೇವಪ್ಪ ಕಿಡಿ
ಬೆಂಗಳೂರು: 'ಕಮಿಷನ್ ದಂಧೆಯನ್ನೂ ಕೂಡಾ ರಾಜ್ಯದಲ್ಲಿರುವ ಬಿಜೆಪಿ ಸರಕಾರ ದೇಶಭಕ್ತಿ ಎಂದು ವಾದಿಸಿದರೆ ಅದರಲ್ಲಿ ಅಚ್ಚರಿ ಏನಿಲ್ಲ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಗೆ ಬೇಸತ್ತು ಖಾಸಗಿ ಶಾಲೆಗಳ ಸಂಘವು ಪ್ರಧಾನಿಗೆ ಪತ್ರ ಬರೆದಿದೆ. ಶಾಲೆಗಳಿಂದಲೂ ಕಮಿಷನ್ ವಸೂಲಾತಿಗೆ ನಿಂತಿರುವ ಈ ಸರ್ಕಾರವು ಎಲ್ಲ ವಲಯಕ್ಕೂ ಕಮಿಷನ್ ಜಾಲವನ್ನು ವಿಸ್ತರಿಸುತ್ತಿದೆ' ಎಂದು ಆರೋಪಿಸಿದ್ದಾರೆ.
ಆರ್ಟಿಇ ಅಡಿಯಲ್ಲಿ ಶುಲ್ಕವನ್ನು ಮರುಪಾವತಿ ಮಾಡಬೇಕಾದರೆ, ಶೇ.30 ರಿಂದ ಶೇ.40ರಷ್ಟು ಲಂಚವನ್ನು ನೀಡಬೇಕಾಗಿದೆ. ಸಾವಿರಾರು ಶಾಲೆಗಳು ಲಂಚವನ್ನು ನೀಡಲಾಗದೆ, ಆರ್ಟಿ ಇ ಶುಲ್ಕಕ್ಕೆ ಅರ್ಜಿ ಸಲ್ಲಿಸಲಾಗದೆ ಮೂಕವೇದನೆಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘ(ರೂಪ್ಸಾ) ಕರ್ನಾಟಕವು ಪ್ರಧಾನಿ ಮೋದಿಗೆ ಪತ್ರ ಬರೆದಿದೆ.
ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ: ಪ್ರಧಾನಿಗೆ ಪತ್ರ ಬರೆದ ರೂಪ್ಸಾ
ರಾಜ್ಯ @BJP4Karnataka ಸರ್ಕಾರದ 40% ಕಮಿಷನ್ ದಂಧೆಗೆ ಬೇಸತ್ತು ಖಾಸಗಿ ಶಾಲೆಗಳ ಸಂಘವು ಪ್ರಧಾನಿಗೆ ಪತ್ರ ಬರೆದಿದೆ.
— Dr H.C.Mahadevappa (@CMahadevappa) August 27, 2022
ಶಾಲೆಗಳಿಂದಲೂ ಕಮಿಷನ್ ವಸೂಲಾತಿಗೆ ನಿಂತಿರುವ ಈ ಸರ್ಕಾರವು ಎಲ್ಲ ವಲಯಕ್ಕೂ ಕಮಿಷನ್ ಜಾಲವನ್ನು ವಿಸ್ತರಿಸುತ್ತಿದೆ!
ಈ ಕಮಿಷನ್ ದಂಧೆಯನ್ನೂ ಕೂಡಾ ದೇಶಭಕ್ತಿ ಎಂದು ಇವರು ವಾದಿಸಿದರೆ ಅಚ್ಚರಿ ಏನಿಲ್ಲ! pic.twitter.com/bxMIOKuPsE