ಕೆಎಸ್ಸಾರ್ಟಿಸಿ ಡಿಪೋದಲ್ಲಿ ನೌಕರ ಆತ್ಮಹತ್ಯೆ
ಕಲಬುರಗಿ: ಬಸ್ ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಚಾಲಕ ಕಂ. ನಿರ್ವಾಹಕ ಸಿಬ್ಬಂದಿ ಓರ್ವ ಬಸ್ ಘಟಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೇಡಂ ಪಟಣ್ಣದಲ್ಲಿ ನಡೆದಿದೆ.
ಅಫಜಲಪೂರ ತಾಲೂಕಿನ ಗುಡೂರ ಗ್ರಾಮದ ನಿವಾಸಿ ಭೀಮಾಶಂಕರ್ (42) ಆತ್ಮಹತ್ಯೆಗೆ ಶರಣಾದ ನೌಕರನಾಗಿದ್ದು, ಈತನಿಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.
'ದಿನನಿತ್ಯ ಕೆಲಸದಿಂದ ಮನೆಗೆ ಬಂದಾಗ ಡಿಪೋ ಅಧಿಕಾರಿ ಡಿಟಿಒ ಹಾಗೂ ಡಿಒ ಅವರ ಕಿರುಕುಳಕ್ಕೆ ಬೇಸತ್ತು ಹೋಗಿದ್ದೇನೆ. ಸರಿಯಾಗಿ ಕೆಲಸ ನೀಡದೇ ಲಂಚ ಬಿಟ್ಟರೆ ಬೇರೇನೂ ಮಾತನಾಡೋದಿಲ್ಲ ಎಂದು ಹೇಳುತ್ತಿದ್ದರು' ಎಂದು ಮೃತನ ಪತ್ನಿ ಮಂಜುಳ ಆರೋಪಿಸಿದ್ದಾರೆ.
'ಸೇಡಂ ಡಿಪೋಗೆ ಬಂದು 2 ತಿಂಗಳು ಮೆಲ್ಪಟ್ಟಿದೆ ಇಲ್ಲಿಯ ವರೆಗು ಸಂಬಳ ನೀಡದೇ ಡಿಪೋ ಅಧಿಕಾರಿ ಕಿರುಕುಳ ನೀಡಿದ್ದಾರೆ. ಅಣ್ಣ ನೇಣಿಗೆ ಶರಣಾಗಿದ್ದು ಸುಳ್ಳು, ಡಿಪೋ ಅಧಿಕಾರಿಗಳೇ ಏನೋ ಮಾಡಿರಬಹುದು' ಎಂದು ಶಂಕೆ ವ್ಯಕ್ತಪಡಿಸಿ ಸೂಕ್ತ ತನಿಖೆಗೆ ಭೀಮಶಂಕರ್ ಸಹೋದರ ಸಿಥಾರ್ತ್ ಆಗ್ರಹಿಸಿದ್ದಾರೆ.
ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
------------------------------------------
'ಕೇಲಸ ಬೇಕಾದರೆ ದಿನನಿತ್ಯ 200 ರೂ. ಡಿಪೋ ಅಧಿಕಾರಿಗೆ ಲಂಚ ನೀಡಿದರೆ ಮಾತ್ರ ಕೆಲಸ ಮಾಡಬೇಕಾಗಿತ್ತು .ಡಿಪೋ ಅಧಿಕಾರಿ. ಡಿಟಿಒ. ಡಿಒ ಅವರಿಂದ ದಿನನಿತ್ಯ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣರಾಗಿದ್ದಾರೆ'
ಮಂಜುಳ, ಮೃತ ಚಾಲಕನ ಪತ್ನಿ