ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ
ವಾರ್ತಾಭಾರತಿ ವಿಶೇಷ ವರದಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ
ಬೆಂಗಳೂರು: ಆಪರೇಶನ್ ಕಮಲದ ಮೂಲಕ ಜನ್ಮತಾಳಿದ ಭ್ರಷ್ಟ ಬಿಜೆಪಿ (BJP) ಸರ್ಕಾರ ಅಕ್ರಮಗಳ ಕೂಪವಾಗಿದೆ ಎಂದು ರಾಜ್ಯ ಕಾಂಗ್ರೆಸ್(Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Singh Surjewala) ಅವರು ರಾಜ್ಯ ಸರಕಾರದ ವಿರುದ್ಧ ತೀವೃ ವಾಗ್ದಾಳಿ ನಡೆಸಿದ್ದಾರೆ.
"ಡಿಸಿಸಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ: ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ವಸೂಲಿ" ಎಂಬ ವಾರ್ತಾಭಾರತಿಯಲ್ಲಿ ಪ್ರಕಟವಾದ ಮಹಾಂತೇಶ್ ಅವರ ವಿಶೇಷ ವರದಿಯನ್ನು ಟ್ವೀಟ್ ಮಾಡಿದ ಅವರು, ಆಪರೇಶನ್ ಕಮಲದ ಮೂಲಕ ಜನ್ಮತಾಳಿದ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ. ಕೆಪಿಎಸ್ಸಿ ನೇಮಕಾತಿ ಅಕ್ರಮ, ಪಿಎಸ್ಐ ನೇಮಕಾತಿ ಅಕ್ರಮ, ಹಾಲು ಒಕ್ಕೂಟ ನೇಮಕಾತಿ ಅಕ್ರಮ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಈಗ ಡಿಸಿಸಿ ಬ್ಯಾಂಕ್ ನಲ್ಲೂ ಅಕ್ರಮ ಎಂದು ಆರೋಪಿಸಿದ ಅವರು, ಕಂಡ ಅಕ್ರಮಗಳು ಇಷ್ಟಾದರೆ ಕಣ್ಣಿಗೆ ಕಾಣದ್ದು ಎಷ್ಟು? ಎಂದು ಪ್ರಶ್ನಸಿದ್ದಾರೆ.
ಆಪರೇಶನ್ ಕಮಲದ ಮೂಲಕ ಜನ್ಮತಾಳಿದ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ.
— Randeep Singh Surjewala (@rssurjewala) September 12, 2022
ಕೆಪಿಎಸ್ಸಿ ನೇಮಕಾತಿ ಅಕ್ರಮ
ಪಿಎಸ್ಐ ನೇಮಕಾತಿ ಅಕ್ರಮ
ಹಾಲು ಒಕ್ಕೂಟ ನೇಮಕಾತಿ ಅಕ್ರಮ
ಕೆಪಿಟಿಸಿಎಲ್ ನೇಮಕಾತಿ ಅಕ್ರಮ
ಈಗ
ಡಿಸಿಸಿ ಬ್ಯಾಂಕ್ ನಲ್ಲೂ ಅಕ್ರಮ
ಕಣ್ಣಿಗೆ ಕಂಡ ಅಕ್ರಮಗಳು ಇಷ್ಟಾದರೆ ಕಣ್ಣಿಗೆ ಕಾಣದ್ದು ಎಷ್ಟು? pic.twitter.com/3BObphLTH9