ಬೆಂಗಳೂರು ಗಾಂಜಾ ನಗರಿಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ: ಬಿಜೆಪಿ ಆರೋಪ
ಬೆಂಗಳೂರು: 'ಬೆಂಗಳೂರು ಗಾಂಜಾ ನಗರಿಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ' ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ' ಸಿದ್ದರಾಮಯ್ಯ ಸರ್ಕಾರ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದೇ ಇದ್ದಿದ್ದರಿಂದಲೇ ಬೆಂಗಳೂರಿನ ಆರೋಗ್ಯ ಅಸ್ತವ್ಯಸ್ತವಾಗಿತ್ತು. ಅಧಿಕಾರದಲ್ಲಿದ್ದಾಗ ಏಕೆ ಬೆಟರ್ ಬೆಂಗಳೂರು ಎಂದು ಚಿಂತನೆ ಮಾಡಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದೆ.
'ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾನವ ಕಳ್ಳ ಸಾಗಣೆಗೆ ಬೆಂಗಳೂರು ನಗರವೇ ಕೇಂದ್ರ ಸ್ಥಳವಾಗಿತ್ತು. ಮಾನ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಬೆಂಗಳೂರನ್ನು ನರಕಸದೃಶ ಮಾಡಿದ್ದು ನೀವೇ ಅಲ್ವೇ?, ಸಿಲಿಕಾನ್ ಸಿಟಿ ಬೆಂಗಳೂರನ್ನು ಕ್ರೈಮ್ ಸಿಟಿ ಮಾಡುವಾಗ
ನೀವು ಎಲ್ಲಿ ಇದ್ದಿರಿ?' ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು ಗಾಂಜಾ ನಗರಿಯಾಗಲು @INCKarnataka ಪಕ್ಷವೇ ನೇರ ಕಾರಣ.
— BJP Karnataka (@BJP4Karnataka) September 14, 2022
ಸಿದ್ದರಾಮಯ್ಯ ಸರ್ಕಾರ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದೇ ಇದ್ದಿದ್ದರಿಂದಲೇ ಬೆಂಗಳೂರಿನ ಆರೋಗ್ಯ ಅಸ್ತವ್ಯಸ್ತವಾಗಿತ್ತು.
ಅಧಿಕಾರದಲ್ಲಿದ್ದಾಗ ಏಕೆ ಬೆಟರ್ ಬೆಂಗಳೂರು ಎಂದು ಚಿಂತನೆ ಮಾಡಿಲ್ಲ @DKShivakumar ಅವರೇ?#CONgressBetrayedBengaluru pic.twitter.com/KMQDVDPgUG