ಡಿಕೆಶಿ-ಸಿದ್ದರಾಮಯ್ಯರ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡ: ಬಿಜೆಪಿ
ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ - ಫೈಲ್ ಚಿತ್ರ
ಬೆಂಗಳೂರು, ಸೆ. 17: ‘ಭಾರತ್ ಜೋಡೋ ಯಾತ್ರೆ'ಯ ಮೂಲಕ ಕಾಂಗ್ರೆಸ್ (Indian National Congress) ಒಳಜಗಳ ಮತ್ತೆ ಬೀದಿಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ಸಿದ್ದರಾಮಯ್ಯ ಅವರೊಳಗಿನ ಕುರ್ಚಿ ಕಿತ್ತಾಟ ಈಗ ಹೊಸರೂಪ ಪಡೆದಿದೆ ಎಂದು ಬಿಜೆಪಿ (BJP) ಲೇವಡಿ ಮಾಡಿದೆ.
ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ,‘ಡಿ.ಕೆ.ಶಿವಕುಮಾರ್ ಅವರೇ, ಭಾರತ್ ಜೋಡೋ ಯಾತ್ರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದಿಂದ ಸಹಕಾರ ಸಿಗುತ್ತಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದೆ.
ಇದನ್ನೂ ಓದಿ: ಕಾಸರಗೋಡು: ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಿಸಲು ಏರ್ ಗನ್ ಹಿಡಿದ ವ್ಯಕ್ತಿ ವಿರುದ್ಧ ಪ್ರಕರಣ
'ಸಿದ್ದರಾಮೋತ್ಸವಕ್ಕೆ ಡಿ.ಕೆ ಶಿವಕುಮಾರ್ ಮುನಿಸು. ಭಾರತ್ ಜೋಡೋ ಯಾತ್ರೆಗೆ ಸಿದ್ದರಾಮಯ್ಯಮುನಿಸು! ವಿಪಕ್ಷ ನಾಯಕ & ಕೆಪಿಸಿಸಿ ಅಧ್ಯಕ್ಷರ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡ' ಎಂದು ಬಿಜೆಪಿ ಟ್ವೀಟಿಸಿದೆ.
ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಒಳಜಗಳ ಮತ್ತೆ ಬೀದಿಗೆ ಬಂದಿದೆ.
— BJP Karnataka (@BJP4Karnataka) September 17, 2022
ಕೆಪಿಸಿಸಿ ಅಧ್ಯಕ್ಷ @DKShivakumar ಮತ್ತು ವಿಪಕ್ಷ @siddaramaiah ಅವರೊಳಗಿನ ಕುರ್ಚಿ ಕಿತ್ತಾಟ ಈಗ ಹೊಸರೂಪ ಪಡೆದಿದೆ.
ಡಿಕೆಶಿ ಅವರೇ, ಭಾರತ್ ಜೋಡೋ ಯಾತ್ರೆಗೆ ಸಿದ್ದರಾಮಯ್ಯ ಬಣದಿಂದ ಸಹಕಾರ ಸಿಗುತ್ತಿಲ್ಲವೇ?#SidduVsDKS pic.twitter.com/Nz3x5C3oih