ವಿಧಾನ ಸೌಧ ಈಗ ವ್ಯಾಪಾರ ಸೌಧ, 40% ಕಮಿಷನ್ ಕಡ್ಡಾಯ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ವಿಧಾನಸೌಧ ಈಗ ವ್ಯಾಪಾರ ಸೌಧವಾಗಿದೆ' ಎಂದು ಆರೋಪಿಸಿದ್ದಾರೆ.
ಈ ಕುರಿರು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಹುದ್ದೆ 2500 ಕೋಟಿ ರೂ.ಗೆ ಬಿಕರಿಯಾಗುವ ಈ ವ್ಯಾಪಾರ ಸೌಧದಲ್ಲಿ ಶಾಸಕಾಂಗಡಿಯಲ್ಲಿ ಶಾಸಕರ ಖರೀದಿಸಲಾಗುತ್ತದೆ. ಕಾರ್ಯಾಂಗಡಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''40% ಕಮಿಷನ್ ಕಡ್ಡಾಯವಾಗಿದೆ ,ಆಪರೇಷನ್ ಕಮಲಕ್ಕೆ ಹಾಕಿದ ಬಂಡವಾಳಕ್ಕೆ ಭರ್ಜರಿ ಲಾಭದ ಫಸಲು ತೆಗೆಯಲಾಗುತ್ತದೆ' ಎಂದು ಸರಕಾರ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವೀಟಿಸಿದ್ದಾರೆ.
ಇದನ್ನೂ ಓದಿ: ‘40 ಪರ್ಸೆಂಟ್ ಕಮಿಷನ್ ಸಿಎಂಗೆ ಸುಸ್ವಾಗತ’: ಬ್ಯಾನರ್ ಹಾಕಿ ಕರ್ನಾಟಕ ಮುಖ್ಯಮಂತ್ರಿ ಗುರಿಯಾಗಿಸಿದ ಟಿಆರ್ ಎಸ್
ವಿಧಾನ ಸೌಧ ಈಗ "ವ್ಯಾಪಾರ ಸೌಧ"ವಾಗಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 17, 2022
ಸಿಎಂ ಹುದ್ದೆ ₹2500 ಕೋಟಿಗೆ ಬಿಕರಿಯಾಗುವ ಈ ವ್ಯಾಪಾರ ಸೌಧದಲ್ಲಿ
➡️ಶಾಸಕಾಂಗಡಿಯಲ್ಲಿ ಶಾಸಕರ ಖರೀದಿಸಲಾಗುತ್ತದೆ
⬅️ಕಾರ್ಯಾಂಗಡಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟವಾಗುತ್ತಿವೆ
⬇️40% ಕಮಿಷನ್ ಕಡ್ಡಾಯವಾಗಿದೆ
ಆಪರೇಷನ್ ಕಮಲಕ್ಕೆ ಹಾಕಿದ ಬಂಡವಾಳಕ್ಕೆ ಭರ್ಜರಿ ಲಾಭದ ಫಸಲು ತೆಗೆಯಲಾಗುತ್ತದೆ! pic.twitter.com/TrhbR45Jig