ಪ್ರಬುದ್ಧರಿಗೆ ಬಿಜೆಪಿಯಲ್ಲಿ ಜಾಗವಿಲ್ಲ, ಅಲ್ಲೇನಿದ್ದರೂ ರೌಡಿಗಳಿಗಷ್ಟೇ ಬೆಲೆ: ರಣದೀಪ್ ಸಿಂಗ್ ಸುರ್ಜೇವಾಲಾ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರೌಡಿಗಳ ಪಡೆ ಕಟ್ಟುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.
ಈ ಕುರಿತು 'ವಾರ್ತಾ ಭಾರತಿ' ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಪ್ರಬುದ್ಧರಿಗೆ ಬಿಜೆಪಿಯಲ್ಲಿ ಜಾಗವಿಲ್ಲ, ಅಲ್ಲೇನಿದ್ದರೂ ಲಂಚಕೋರರು ಹಾಗೂ ರೌಡಿಗಳಿಗಷ್ಟೇ ಬೆಲೆ! ವೋಟರ್ ಲಿಸ್ಟಿಂದ ಮತದಾರರ ಹೆಸರು ತೆಗೆದದ್ದಾಯಿತು. ಈಗ ಚುನಾವಣೆ ಸಮಯದಲ್ಲಿ ಮತದಾರರನ್ನು ಹೆದರಿಸಲು BJPRowdyMorcha.com ಕಟ್ಟುತ್ತಿದೆ ಬಿಜೆಪಿ! ಅಲ್ಲವೇ ಬಸವರಾಜ ಬೊಮ್ಮಾಯಿ? ಸುಸಂಸ್ಕೃತ ಪಕ್ಷಕ್ಕೆ ಸೇರಲು ಬೇಕಾದ ಅರ್ಹತೆ ಕೊಲೆ ಸುಲಿಗೆಯೇ? ಎಂದು ಪ್ರಶ್ನಿಸಿದ್ದಾರೆ.
''ರೌಡಿಗಳನ್ನು ರೌಡಿಗಳೆನ್ನಬೇಡಿ’-ಇದು ಮಾಜಿ ರೌಡಿ ಶೀಟರ್ ಸಿ.ಟಿ.ರವಿ ಫಾರ್ಮಾನು!, ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ! ‘ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ’ ಇದು ಬಿಜೆಪಿಯ ಹೊಸ ಧ್ಯೇಯವಾಕ್ಯ'' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ.
ಪ್ರಬುದ್ಧರಿಗೆ ಬಿಜೆಪಿಯಲ್ಲಿ ಜಾಗವಿಲ್ಲ, ಅಲ್ಲೇನಿದ್ದರೂ ಲಂಚಕೋರರು & ರೌಡಿಗಳಿಗಷ್ಟೇ ಬೆಲೆ!
— Randeep Singh Surjewala (@rssurjewala) December 4, 2022
ವೋಟರ್ ಲೀಸ್ಟಿಂದ ಮತದಾರರ ಹೆಸರು ತೆಗೆದದ್ದಾಯಿತು, ಈಗ ಚುನಾವಣೆ ಸಮಯದಲ್ಲಿ ಮತದಾರರನ್ನು ಹೆದರಿಸಲು https://t.co/8CNT3yyxX5 ಕಟ್ಟುತ್ತಿದೆ ಬಿಜೆಪಿ!
ಅಲ್ಲವೇ @BSBommai?
ಸುಸಂಸ್ಕೃತ ಪಕ್ಷಕ್ಕೆ ಸೇರಲು ಬೇಕಾದ ಅರ್ಹತೆ ಕೊಲೆ ಸುಲಿಗೆಯೇ? pic.twitter.com/x24QiBznZM