ಇಂದಿನಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ ಆರಂಭ; ಚೆಗೆವಾರ ಪುತ್ರಿ ಆಲಿಡಾ ಗೆವಾರ ಆಗಮನ
ಬೆಂಗಳೂರು, ಜ.17:ದೇಶದಎಲ್ಲಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತಿರುವ ಸೆಂಟರ್ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ಅಖಿಲ ಭಾರತ ಸಮ್ಮೇಳನವು ನಗರದ ಅರಮನೆ ಮೈದಾನದಲ್ಲಿ ಇಂದಿಂದ (ಜ.18) ಜ.23ರವರೆಗೆ ನಡೆಯಲಿದೆ.
ಸಿಐಟಿಯು ಸಂಘಟನೆಯ ವಿವಿಧ ವಿಭಾಗದ ಕಾರ್ಮಿಕರನ್ನು ಪ್ರತಿನಿಧಿಸಿ ಸುಮಾರು 1500 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ.ಇತ್ತೀಚೆಗೆ ಸರಕಾರದ ನೀತಿಯಿಂದಾಗಿ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಪರಿಣಾಮ ಬಡತನ, ಹಸಿವು, ಅನಾರೋಗ್ಯ, ಅಪೌಷ್ಠಿಕತೆ ಹೆಚ್ಚುತ್ತಿದೆ.ಈ ಅಂಶಗಳನ್ನು ಸೇರಿದಂತೆ ದೇಶದ ಕಾರ್ಮಿಕ ವರ್ಗದಒಟ್ಟು ವಿಚಾರಗಳ ಬಗ್ಗೆ ಅಖಿಲ ಭಾರತ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ.
ವರ್ಲ್ಡ್ ಫೆಡರೇಷನ್ ಆಫ್ಟ್ರೇಡ್ ಯೂನಿಯನ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕೀರ್ತಿಸಿಸ್ ಸಮ್ಮೇಳನಕ್ಕೆ ಶುಭ ಕೋರಲಿದ್ದಾರೆ. ಜ.19ರಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಪುತ್ರಿ ಆಲಿಡಾ ಗೆವಾರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
Next Story