ಇಂದಿನ ವಾಸ್ತವವನ್ನು ಗೆರೆಗಳಲ್ಲಿ ಬಿಡಿಸಿದ ಕಾರ್ಟೂನಿಸ್ಟ್ ಪಿ.ಮಹಮ್ಮದ್: ಸಿದ್ದರಾಮಯ್ಯ
ಬೆಂಗಳೂರು: 'ವಾರ್ತಾ ಭಾರತಿ' ಪತ್ರಿಕೆ ಹಾಗೂ ಆನ್ ಲೈನ್ ನಲ್ಲಿ ಪ್ರಕಟವಾದ ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ಅವರು ರಚಿಸಿದ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಕುರಿತ ವ್ಯಂಗ್ಯ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, 'ಇದೇ ಇಂದಿನ ವಾಸ್ತವ' ಎಂದು ಹೇಳಿದ್ದಾರೆ.
''ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ಇಂದಿನ ವಾಸ್ತವವನ್ನು ಗೆರೆಗಳಲ್ಲಿ ಬಿಡಿಸಿದ್ದಾರೆ. ಅಂದು ಎದೆಗೆ, ಇಂದು ಬೆನ್ನಿಗೆ. ಇದೇ ಇಂದಿನ ವಾಸ್ತವ. #Gandhi ಎಂದು ಬರೆದುಕೊಂಡಿದ್ದಾರೆ.
"ಅಂದು ಗಾಂಧೀಜಿಯವರನ್ನು ಹತ್ಯೆ ಮಾಡಿದವರೇ ಇಂದು ಗಾಂಧಿ ಚಿಂತನೆಗಳ ಹತ್ಯೆಗೆ ಹೊರಟಿದ್ದಾರೆ. ದುಷ್ಟರಿಂದ ಗಾಂಧೀಜಿಯವರನ್ನು ಉಳಿಸಿಕೊಳ್ಳಲಾಗಲಿಲ್ಲ, ಗಾಂಧಿ ಚಿಂತನೆಗಳನ್ನಾದರೂ ಉಳಿಸಿಕೊಳ್ಳೋಣ. ರಾಷ್ಟ್ರಪಿತನ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಎಲ್ಲ ದೇಶಭಕ್ತರಿಗೆ ನನ್ನ ಗೌರವದ ನಮನಗಳು. #Gandhi #MartyrsDay ಎಂದು ಸಿದ್ದರಾಮಯ್ಯ ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ."
ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್
— Siddaramaiah (@siddaramaiah) January 30, 2023
ಇಂದಿನ ವಾಸ್ತವವನ್ನು ಗೆರೆಗಳಲ್ಲಿ ಬಿಡಿಸಿದ್ದಾರೆ.
ಅಂದು ಎದೆಗೆ
ಇಂದು ಬೆನ್ನಿಗೆ.
ಇದೇ ಇಂದಿನ ವಾಸ್ತವ.#Gandhi pic.twitter.com/RP7ixSxuZJ