-

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಿ: ಸಿಎಂಗೆ ಪತ್ರ ಬರೆದ 'ನೈಜ ಹೋರಾಟಗಾರರ ವೇದಿಕೆ'

-

ಶಿವಮೊಗ್ಗ : ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು 'ನೈಜ ಹೋರಾಟಗಾರರ ವೇದಿಕೆ' ಆಗ್ರಹಿಸಿದೆ. 

ಈ ಸಂಬಂಧ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ  'ನೈಜ ಹೋರಾಟಗಾರರ ವೇದಿಕೆಯ  ಹೆಚ್. ಎಂ. ವೆಂಕಟೇಶ್, ಯಡಿಯೂರಪ್ಪನವರು ವಿಮಾನ ನಿಲ್ದಾಣಕ್ಕೆ ನನ್ನ ಹೆಸರನ್ನು ಇಡುವುದು ಬೇಡವೆಂದು ಹಲವಾರು ಬಾರಿ ಹೇಳಿದ್ದರೂ ಮತ್ತೆ ಪದೇ ಪದೇ ಅವರ ಹೆಸರನ್ನು ತಾವು (ಮುಖ್ಯಮಂತ್ರಿ) ಪ್ರಸ್ತಾಪಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಮತ್ತು ಸಮಂಜಸವಲ್ಲ ಎಂದು ಹೇಳಿದ್ದಾರೆ. 

ಪತ್ರದ ಪೂರ್ಣ ಪಾಠ ಹೀಗಿದೆ...

''ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಗುರುತರ ಜವಾಬ್ದಾರಿಯುತಸ್ಥಾನದಲ್ಲಿರುವ ತಾವುಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಲು ತಯಾರಿ ನಡೆಸುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ''

''ಆದರೆ ಮಾಜಿ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರು ನನ್ನ ಹೆಸರನ್ನು ಇಡುವುದು ಬೇಡವೆಂದು ಹಲವಾರು ಬಾರಿ ಹೇಳಿದ್ದಾರೆ.  ಅವರ ಮನಸ್ಸಿನ ಅಂತರಾಳದಲ್ಲಿ ಗೊತ್ತಿದೆ ನನ್ನ ಹೆಸರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡುವುದು ಸಮಂಜಸವಲ್ಲ ಮತ್ತು ಯೋಗ್ಯವಲ್ಲವೆಂದು. ನಿಜವಾಗಿಯೂ ಅವರು ಆತ್ಮ ಮತ್ತು  ಹೃದಯದ ಅಂತರಾಳದಿಂದ ನನ್ನ ಹೆಸರನ್ನು ಇಡುವುದು ಬೇಡವೆಂದು ಹೇಳಿರುವುದು ಸರಿಯಾಗಿ ಇದೆ''

''ಶ್ರೀಯುತ ಯಡಿಯೂರಪ್ಪನವರ ಮನವಿ ಸಮಂಜಸವಾಗಿದ್ದು ಅವರ ಹೆಸರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬೇಡವೆಂದ ಮೇಲೆ ಮತ್ತೆ ಪದೇ ಪದೇ ಅವರ ಹೆಸರನ್ನು ತಾವು ಪ್ರಸ್ತಾಪಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಮತ್ತು ಸಮಂಜಸವಲ್ಲ''

''ಶಿವಮೊಗ್ಗ ಅತ್ಯಂತ ಪ್ರಗತಿಪರ ಚಿಂತಕರು,  ಸಾಮಾಜಿಕ ನೆಲೆಗಟ್ಟಿನಲ್ಲಿ,ಸಮಾಜವಾದದ ನೆಲಗಟ್ಟಿನಲ್ಲಿ ಸೌಹೃದಯರ ನಾಡಾಗಿದ್ದು ಇಲ್ಲಿ ಹುಟ್ಟಿ ಬೆಳೆದ  ರಾಜಕಾರಣಿಗಳು, ಕವಿಗಳು, ಸಾಹಿತಿಗಳು  ದೇಶದ ಗಮನವನ್ನೇ ಸೆಳೆದಿದ್ದಾರೆ''

''ಅದರಲ್ಲೂ ಮುಂಚೂಣಿಯಲ್ಲಿರುವ ಹೆಸರು ನಮ್ಮ ನಿಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದ ರಾಷ್ಟ್ರಕವಿ ಕುವೆಂಪು, ಕಡಿದಾಳ್ ಮಂಜಪ್ಪ ಶಾಂತವೇರಿ ಗೋಪಾಲಗೌಡ ಇಂತಹ  ವ್ಯಕ್ತಿಗಳು ಹುಟ್ಟಿ ಬೆಳೆದು ಈ ನಾಡಿಗೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟು ಈ ನಾಡಿನ ಮಣ್ಣಿನಲ್ಲಿ, ಈ ಪ್ರಕೃತಿಯಲ್ಲಿ  ಲೀನರಾಗಿದ್ದರೆ. ಆದರೂ ಕೂಡ ಅವರ ಹೆಸರು ಅಜರಾಮರ ಮತ್ತು ಅವರು ಹಾಕಿಕೊಟ್ಟ ಮಾರ್ಗ ಅತ್ಯಂತ ಸರಳವಾಗಿದ್ದರೂ ಸಹ ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಲು ಇಂದಿನ ರಾಜಕಾರಣಿಗಳು ಮತ್ತು ಅದರಲ್ಲೂ ಯುವ ಪೀಳಿಗೆಯ ರಾಜಕಾರಣಿಗಳಿಗೆ ಸಾಧ್ಯವಾಗದಿರುವುದು ದುರಾದೃಷ್ಟಕರ ಸಂಗತಿ''

''ಇಂತಹವರ ಹೆಸರನ್ನು ಇನ್ನಷ್ಟು ಶಾಶ್ವತಗೊಳಿಸಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡುವಂತೆ ನೈಜ ಹೋರಾಟಗಾರರ ವೇದಿಕೆಯು ವಿನಯ ಪೂರ್ವಕವಾದ ಆಗ್ರಹವನ್ನು ಮಾಡುತ್ತಿದೆ''

''ನಿಮ್ಮ ರಾಜಕೀಯ ವರಸೆ, ಜಾತಿ, ಧರ್ಮ, ಮತಬ್ಯಾಂಕ್ ರಾಜಕೀಯ ಇವುಗಳನ್ನೆಲ್ಲ ಬದಿಗೆ ಸರಿಸಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡುವಂತೆ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಕೂಡ ಅವರ ಹೆಸರನ್ನು ಇಡಲು ನಿಮಗೆ ಇಚ್ಚಾ ಶಕ್ತಿ ಇಲ್ಲದಿದ್ದಲ್ಲಿ ಕೊನೆಯ ಪಕ್ಷ  ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡುವಂತೆ ನಾವು ಸೂಚಿಸುತ್ತೇವೆ.''

''ಇವರೆಲ್ಲರ ಹೆಸರ ಹೊರತಾಗಿಯೂ ನೀವು ಬೇರೆ ಹೆಸರನ್ನು ಅಥವಾ ಯಡಿಯೂರಪ್ಪನವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೆ ಆದಲ್ಲಿ ಕುವೆಂಪುರವರ ವಿಶ್ವಮಾನವ ಸಂದೇಶಕ್ಕೆ ಕಡಿದಾಳ್ ಮಂಜಪ್ಪ ನವರ ಪ್ರಾಮಾಣಿಕತೆಗೆ ಶಾಂತವೇರಿ ಗೋಪಾಲಗೌಡರ ಸಮಾಜವಾದಕ್ಕೆ ಧಕ್ಕೆ ತಂದಂತೆ ಎಂದು ನಾವು ಭಾವಿಸುತ್ತೇವೆ. ಹಾಗೂ ನಿಮ್ಮ ಪ್ರಾಮಾಣಿಕತೆ, ಪಾರದರ್ಶಕ  ಆಡಳಿತ, ಭ್ರಷ್ಟಾಚಾರ ರಹಿತಆಡಳಿತ, ಜಾತಿ ರಾಜಕಾರಣದ ಬಗ್ಗೆ ನಾವು ಪ್ರಶ್ನಿಸಬೇಕಾಗುತ್ತದೆ''

''ಈ ಎಲ್ಲಾ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಜನರ ನಾಡಿಮಿಡಿತವನ್ನು ತಾವು ಅರಿತಿದ್ದೀರಿ ಎಂದು ಜನರ ಹೃದಯಕ್ಕೆ ಸ್ಪಂದಿಸುತ್ತಿದ್ದೀರಿ ಎಂದು ನಾವು ಭಾವಿಸುತ್ತೇವೆ'' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top