ಹುಲಿ ದಾಳಿಗೆ ಬಾಲಕ ಬಲಿ : ದಕ್ಷಿಣ ಕೊಡಗಿನಲ್ಲಿ ಘಟನೆ
ಮಡಿಕೇರಿ: ಹುಲಿ ದಾಳಿಗೆ ಬಾಲಕನೋರ್ವ ಮೃತಪಟ್ಟಿರುವ ಘಟನೆ ದಕ್ಷಿಣ ಕೊಡಗಿನ ಕುಟ್ಟದ ಪಾಲೇರಿ ಎಂಬಲ್ಲಿ ನಡೆದಿದೆ. ಪಂಚವಳ್ಳಿ ಮೂಲದ ಚೇತನ್ (12) ಎಂಬಾತನೇ ಮೃತಪಟ್ಟ ಬಾಲಕ.
ಕಾಫಿ ತೋಟದಲ್ಲಿದ್ದಾಗ ಹುಲಿ ದಾಳಿ ಮಾಡಿದೆ. ತೋಟದ ಕೆಲಸಕ್ಕೆಂದು ಬಂದಿದ್ದ ಪೋಷಕರೊಂದಿಗೆ ಬಾಲಕ ಬಂದಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story