'ಗುತ್ತಿಗೆದಾರರು ಸಾಯ್ತಾ ಇರ್ತಾರೆ, ಅದಕ್ಕೆ ನಾವೇನು ಮಾಡೋಣ' ಎಂದ ಸಚಿವ ಮಾಧುಸ್ವಾಮಿ!
ಜನರ ಸಾವು ಎಂದರೆ BJP ನಾಯಕರಿಗೆ ಇರುವೆಗಳು ಸತ್ತಂತೆ: ಕಾಂಗ್ರೆಸ್ ಆಕ್ರೋಶ
ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಅವರ ಪ್ರಶ್ನೆಯೊಂದಕ್ಕೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಉಡಾಫೆ ಉತ್ತರ ನೀಡಿದ್ದು, ಈ ಕುರಿತ ವಿಡಿಯೋ ಒಂದನ್ನ ಕಾಂಗ್ರೆಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಸದನದಲ್ಲಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ತುಮಕೂರಿನ ದೇವದುರ್ಗದಲ್ಲಿ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಅವರು ಪ್ರತಿಕ್ರಿಯಿಸಿ, "ಹಾಗೆಲ್ಲ ತುಂಬಾ ಮಂದಿ ಸಾಯ್ತಾ ಇರ್ತಾರೆ, ಅದಕ್ಕೆ ನಾವೇನು ಮಾಡೋಣ" ಎಂದು ಮರು ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಜನರ ಸಾವು ಎಂದರೆ ಬಿಜೆಪಿ ನಾಯಕರಿಗೆ ಇರುವೆಗಳು ಸತ್ತಂತೆ.. ಗುತ್ತಿಗೆದಾರ ಸತ್ತಿದ್ದಾನೆ ಎಂದರೆ "ಸಾಯ್ತಾ ಇರ್ತಾರೆ, ಅದಕ್ಕೆ ನಾವೇನು ಮಾಡೋಣ" ಮಾಧುಸ್ವಾಮಿಯವರ ಉಡಾಫೆ ಜನರ ಜೀವದೆಡೆಗೆ ಬಿಜೆಪಿಯ ತಾತ್ಸಾರಕ್ಕೆ ಹಿಡಿದ ಕನ್ನಡಿ. ಹೀಗಾಗಿಯೇ ರೈತರ ಆತ್ಮಹತ್ಯೆ ಹೆಚ್ಚಿದ್ದು, ಕೋವಿಡ್ ರಸ್ತೆಗುಂಡಿಗೆ ಜನ ಸತ್ತಿದ್ದು ಅಲ್ಲವೇ?'' ಎಂದು ಬಿಜೆಪಿಯನ್ನ ಪ್ರಶ್ನೆ ಮಾಡಿದೆ.
ಜನರ ಸಾವು ಎಂದರೆ ಬಿಜೆಪಿ ನಾಯಕರಿಗೆ ಇರುವೆಗಳು ಸತ್ತಂತೆ..
— Karnataka Congress (@INCKarnataka) February 16, 2023
ಗುತ್ತಿಗೆದಾರ ಸತ್ತಿದ್ದಾನೆ ಎಂದರೆ "ಸಾಯ್ತಾ ಇರ್ತಾರೆ, ಅದಕ್ಕೆ ನಾವೇನು ಮಾಡೋಣ" ಮಾಧುಸ್ವಾಮಿಯವರ ಉಡಾಫೆ ಜನರ ಜೀವದೆಡೆಗೆ ಬಿಜೆಪಿಯ ತಾತ್ಸಾರಕ್ಕೆ ಹಿಡಿದ ಕನ್ನಡಿ.
ಹೀಗಾಗಿಯೇ
ರೈತರ ಆತ್ಮಹತ್ಯೆ ಹೆಚ್ಚಿದ್ದು, ಕೋವಿಡ್ ರಸ್ತೆಗುಂಡಿಗೆ ಜನ ಸತ್ತಿದ್ದು ಅಲ್ಲವೇ @BJP4Karnataka? pic.twitter.com/7EnHCzeyQ7