ಇಂದಿನಿಂದ ನೂತನ 'ಅಂಬಾರಿ ಉತ್ಸವ' ಬಸ್ಗಳ ಕಾರ್ಯಾಚರಣೆ ಆರಂಭ
ಬೆಂಗಳೂರು, ಫೆ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ನೂತನ ಅಂಬಾರಿ ಉತ್ಸವ ಯೋಜನೆಯ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳು ಇಂದಿನಿಂದ ಕಾರ್ಯಾಚರಣೆ ನಡೆಸಲಿವೆ.
ಬೆಂಗಳೂರಿನಿಂದ ಹೊರಡುವ ಈ ಬಸ್ಸುಗಳು ವಿವಿಧ ರಾಜ್ಯದ ಸ್ಥಳಗಳಿಗೆ ತೆರಳಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು-ಹೈದರಾಬಾದ್, ಬೆಂಗಳೂರು-ಹೈಟೆಕ್ ಸಿಟಿ, ಬೆಂಗಳೂರು-ಸಿಕಂದ್ರಾಬಾದ್, ಬೆಂಗಳೂರು-ಪಣಜಿಗೆ ತೆರಳಿದರೆ, ಶಾಂತಿನಗರ ಬಸ್ ನಿಲ್ದಾಣದಿಂದ ಬೆಂಗಳೂರು-ತ್ರಿಶೂರು, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ತ್ರಿವೆಂಡ್ರಮ್ ಗೆ ತೆರಳಲಿವೆ.
ಸಾರ್ವಜನಿಕರು ಈ ನೂತನ ಅಂಬಾರಿ ಉತ್ಸವ ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆಎಸ್ಸಾರ್ಟಿಸಿ ಮನವಿಯಲ್ಲಿ ತಿಳಿಸಿದೆ.
Ambaari Utsava Buses Test Drive pic.twitter.com/JEqowKSuWq
— KSRTC (@KSRTC_Journeys) February 21, 2023
Next Story