Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ...

ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತಿರುವ ಮೋದಿ: ದಿನೇಶ್ ಗುಂಡೂರಾವ್ ಕಿಡಿ

''ಚುನಾವಣಾ ಸಮಯದಲ್ಲಿ ಕರೆಯದೇ ಬರುವ ಅತಿಥಿ...''

12 March 2023 3:30 PM IST
share
ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತಿರುವ ಮೋದಿ: ದಿನೇಶ್ ಗುಂಡೂರಾವ್ ಕಿಡಿ
''ಚುನಾವಣಾ ಸಮಯದಲ್ಲಿ ಕರೆಯದೇ ಬರುವ ಅತಿಥಿ...''

ಬೆಂಗಳೂರು: ವಿವಿಧ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೆರವೇರಿಸಲು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ''ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಮೋದಿಯವರಿಗೆ ಕೆಲವು ಪ್ರಶ್ನೆಗಳು. ಮೋದಿಯವರೇ, ನಿಮಗೆ ಚುನಾವಣಾ ಸಮಯದಲ್ಲಿ ಮಾತ್ರ ಕರ್ನಾಟಕ ನೆನಪಾಗುವುದ್ಯಾಕೆ?  ಬರ ಬಂದಾಗ,ಪ್ರವಾಹ ಬಂದಾಗ ನಿಮಗೆ ಕರ್ನಾಟಕ ನೆನಪಾಗುವುದಿಲ್ಲ. ಆದರೆ ಚುನಾವಣಾ ಸಮಯದಲ್ಲಿ ನೀವು ಕರೆಯದೇ ಬರುವ ಅತಿಥಿ. ನೀವು ಈಗ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಪದೇ ಪದೇ ಬರುತ್ತೀರಿ?'' ಎಂದು ಕಿಡಿಕಾರಿದ್ದಾರೆ. 

''ಮೋದಿಯವರೇ, ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಬರಲು ನಿಮಗೆ ನೂರು ನೆಪಗಳು ಸಿಗುತ್ತವೆ‌. ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ನೀವು ಇದ್ದಕ್ಕಿದ್ದಂತೆ ಎಸ್ಕೇಪ್ ಆರ್ಟಿಸ್ಟ್ ಆಗಿಬಿಡ್ತೀರಾ. ಲಾಭ ಇಲ್ಲದೆ ನೀವು ಕರ್ನಾಟಕದತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ನೀವೊಂದು ರೀತಿ 'ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್' ಎಂಬ ಗಿರಾಕಿಯಂತಲ್ಲವೆ.?'' ಎಂದು ವ್ಯಂಗ್ಯವಾಡಿದ್ದಾರೆ. 

''ಮೋದಿಯವರೇ, ನೀವು ಪ್ರತಿ ಸಲ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತೀರಿ.ಯಥಾಪ್ರಕಾರ ಆ ಸುಳ್ಳಿನ ಕ್ಯಾಸೆಟ್ ಹಾಕಿ ಜನರನ್ನು‌ ಮೂರ್ಖರನ್ನಾಗಿ ಮಾಡುತ್ತೀರಿ.ನೀವು ಬಿಡುವಿದ್ದಾಗ ನಿಮ್ಮ ಭಾಷಣ ನೀವೇ ಕೇಳಿ,ಆಗ ನಿಮ್ಮ ಮೇಲೆ ನಿಮಗೆ ಜಿಗುಪ್ಸೆ ಬಂದು ಆತ್ಮಹತ್ಯಾ ಭಾವ ಕಾಡುವುದು ಸತ್ಯ‌. ಹೀಗಿರುವಾಗ ಎಷ್ಟು ದಿನ ಜನ ನಿಮ್ಮ ಸುಳ್ಳಿನ ಭಾಷಣ ಕೇಳಬೇಕು.?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಮೋದಿಯವರೇ,2018ರಲ್ಲಿ ನೀವು ರಾಜ್ಯಕ್ಕೆ ಬಂದಾಗ,ಅಂದಿನ ನಮ್ಮ ಸರ್ಕಾರವನ್ನು 10% ಪರ್ಸೆಂಟ್ ಸರ್ಕಾರ ಎಂದು ಸ್ಪಿಟ್ ಆ್ಯಂಡ್ ರನ್ ಮಾಡಿದ್ರೀ. ಈಗ ನಿಮ್ಮ‌ ಬೊಮ್ಮಾಯಿ ಸರ್ಕಾರದ ಮೇಲೆ 40% ಪರ್ಸೆಂಟ್ ಸರ್ಕಾರ ಎಂಬ ಆರೋಪವಿದೆ. ಆ ಆರೋಪಕ್ಕೆ ಸಾಕ್ಷಿಯೂ ಇದೆ. ಬೊಮ್ಮಾಯಿ ಸರ್ಕಾರದ 40% ಪರ್ಸೆಂಟ್ ಕಮೀಷನ್ ಬಗ್ಗೆ ನೀವು ಬಾಯಿ ಬಿಡುವುದಿಲ್ಲ ಯಾಕೆ.?'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿರೂಪಾಕ್ಷಪ್ಪ ಮೇಲೆ ED ತನಿಖೆ ಯಾಕಿಲ್ಲ‌?: ಮೋದಿಯವರೇ,ಮನೀಷ್ ಸಿಸೋಡಿಯಾ ಮನೆಯಲ್ಲಿ 10 ಸಾವಿರ ನಗದು ಸಿಕ್ಕ ಕಾರಣಕ್ಕೆ ED ತನಿಖೆ ಮಾಡಿಸಿ ಅರೆಸ್ಟ್ ಮಾಡಿಸುತ್ತೀರಿ.ನಿಮ್ಮದೇ ಪಕ್ಷದ ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪ‌ ಮನೆಯಲ್ಲಿ KSDlನಲ್ಲಿ ಅಕ್ರಮದ 6.2 ಕೋಟಿ ನಗದು ಸಿಕ್ಕಿದೆ. ಜೊತೆಗೆ ಲೋಕಾಯುಕ್ತ ದಾಳಿಯೂ ಆಗಿದೆ.ಇಷ್ಟಾದರೂ ಮಾಡಾಳು ವಿರೂಪಾಕ್ಷಪ್ಪ ಮೇಲೆ ED ತನಿಖೆ ಯಾಕಿಲ್ಲ‌? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

''ಮೋದಿಯವರೇ, ಬಾಯಿ ಬಿಟ್ಟರೆ ನನ್ನ ಆಡಳಿತದಲ್ಲಿ ಭಾರತ ವಿಶ್ವಗುರು ಆಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತೀರಿ. ಆದರೆ ಹಸಿವಿನ ಸೂಚ್ಯಂಕದಲ್ಲಿ ಭಾರತ, ಬಾಂಗ್ಲಾಕ್ಕಿಂತ ಕಡೆಯಾಗಿದೆ. ಬಡತನ ವ್ಯಾಪಕವಾಗಿದೆ.‌ 2014 ರಲ್ಲಿ ಭಾರತದ ಸಾಲ 63,583 ಲಕ್ಷ ಕೋಟಿ ಇತ್ತು. ಈಗ ಆ ಸಾಲ 1,40 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಬಗ್ಗೆಯಾದರೂ ಬಾಯಿ ಬಿಡುವಿರಾ?''

''ಮೋದಿಯವರೇ, ಬೇರೆ ಪಕ್ಷದ ಕಳಂಕಿತರು ನಿಮ್ಮ‌ ಪಕ್ಷಕ್ಕೆ ಬಂದ ತಕ್ಷಣವೇ ಶುದ್ದಹಸ್ತರಾಗಿಬಿಡುತ್ತಾರೆ. ಕಳಂಕಿತರು ನಿಮ್ಮ ಪಕ್ಷಕ್ಕೆ ಸೇರಿದ ತಕ್ಷಣ ಅವರ ಮೇಲೆ‌ ನಡೆಯುತ್ತಿದ್ದ IT, ED ಮತ್ತು CBI ತನಿಖೆಗಳು‌ ದಿಢೀರ್ ಸ್ಥಗಿತಗೊಳ್ಳುತ್ತವೆ. ಬೇರೆ ಪಕ್ಷದ ಕಳಂಕಿತರು ನಿಮ್ಮ ಪಕ್ಷಕ್ಕೆ ಸೇರಿದ ತಕ್ಷಣ ಶುದ್ಧಹಸ್ತರಾಗುವ ಸೋಜಿಗದ ಬಗ್ಗೆ ದಯವಿಟ್ಟು ಮಾತಾಡುವಿರಾ.?''

''ಮೋದಿಯವರೇ, ನಿಮ್ಮ ಓಡಾಟ-ಒಡನಾಟ ಅದಾನಿ ಜೊತೆಯಲ್ಲೆ. ಸಂಗ್ಯಾ-ಬಾಳ್ಯಾರಂತೆ ನೀವಿಬ್ಬರು. ಈ ಮಧ್ಯೆ ಅದಾನಿ ಆಸ್ತಿ‌ ಸಾವಿರಾರು ಪಟ್ಟು ಏರಿಕೆಯಾಗಿದೆ. ಅದಾನಿ ದಿಢೀರ್ ಶ್ರೀಮಂತರಾಗಲು ನಿಮ್ಮ ಕೊಡುಗೆಯೇನು ಎಂದು ಜನರಿಗೆ ತಿಳಿಯಬೇಕಲ್ಲವೇ.? ಮಂಡ್ಯದ ನೆಲದಲ್ಲಿ ನಿಂತು ನಿಮ್ಮ‌ ಮತ್ತು ಅದಾನಿ‌ ನಡುವಿನ ಸಂಬಂಧದ ಬಗ್ಗೆ ಮಾತಾಡುವ ಧೈರ್ಯ ಮಾಡುವಿರಾ?''

''ಮೋದಿಯವರೇ, ಅಚ್ಛೆದಿನದ ಕನಸು ಬಿತ್ತಿ ನೀವು ಅಧಿಕಾರದ ಗದ್ದುಗೆ ಏರಿದ್ದೀರಿ. ಕಳೆದ 9 ವರ್ಷದಲ್ಲಿ ಜನರಿಗೆ ಯಾವ ಅಚ್ಛೆದಿನ್ ಸಿಕ್ಕಿದೆ ಹೇಳಿ.? 400 ಇದ್ದ ಸಿಲಿಂಡರ್ ಬೆಲೆ ಈಗ 1200. 70 ರೂಪಾಯಿ ಇದ್ದ ಪೆಟ್ರೋಲ್ ಈಗ 103. ಅಡುಗೆ ಎಣ್ಣೆಯ ಬೆಲೆ 80 ರಿಂದ 180. ರಸಗೊಬ್ಬರದ ಬೆಲೆ 450 ರಿಂದ 1400. ಇದ್ಯಾವ ಸೀಮೆಯ ಅಚ್ಛೆದಿನ್ ಮೋದಿಯವರೆ.?''

''ಮೋದಿಯವರೇ, ಬಿಲ್ಡಪ್‌, ಶೋ ಮ್ಯಾನ್‌ಶಿಪ್ ಒಂದು ರೀತಿ ಬಲೂನ್ ಇದ್ದಂತೆ.ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು. ಇಮೇಜ್ ಬಿಲ್ಡ್ ಮಾಡುವ ಶೋಕಿ ಬಿಡಿ.ನಿಮ್ಮ ಬಿಲ್ಡಪ್‌ಗೋಸ್ಕರ ಕಳೆದ 9 ವರ್ಷಗಳಲ್ಲಿ ದೇಶದ ಜನರ ಹಿತಾಸಕ್ತಿಯೇ ಬಲಿಯಾಗಿದೆ.ಇನ್ನಾದರೂ ದೇಶದ ಜನರಿಗೆ ಒಳ್ಳೆಯದು ಮಾಡಿ. ದೇಶದ ಜನರೆಂದರೆ ಅಂಬಾನಿ-ಅದಾನಿಯಲ್ಲ ಎಂದು ನೆನಪಿಟ್ಟುಕೊಳ್ಳಿ'' ಎಂದು  ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಮಾಡಿದ್ದಾರೆ. 

10
ಮೋದಿಯವರೇ,ಬಿಲ್ಡಪ್‌,ಶೋ ಮ್ಯಾನ್‌ಶಿಪ್ ಒಂದು ರೀತಿ ಬಲೂನ್ ಇದ್ದಂತೆ.

ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು.

ಇಮೇಜ್ ಬಿಲ್ಡ್ ಮಾಡುವ ಶೋಕಿ ಬಿಡಿ.

ನಿಮ್ಮ ಬಿಲ್ಡಪ್‌ಗೋಸ್ಕರ ಕಳೆದ 9ವರ್ಷಗಳಲ್ಲಿ ದೇಶದ ಜನರ ಹಿತಾಸಕ್ತಿಯೇ ಬಲಿಯಾಗಿದೆ.

ಇನ್ನಾದರೂ ಜನರಿಗೆ ಒಳ್ಳೆಯದು ಮಾಡಿ.

ಜನರೆಂದರೆ ಅಂಬಾನಿ-ಅದಾನಿಯಲ್ಲ ಎಂದು ನೆನಪಿಟ್ಟುಕೊಳ್ಳಿ.

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 12, 2023

10
ಮೋದಿಯವರೇ,ಬಿಲ್ಡಪ್‌,ಶೋ ಮ್ಯಾನ್‌ಶಿಪ್ ಒಂದು ರೀತಿ ಬಲೂನ್ ಇದ್ದಂತೆ.

ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು.

ಇಮೇಜ್ ಬಿಲ್ಡ್ ಮಾಡುವ ಶೋಕಿ ಬಿಡಿ.

ನಿಮ್ಮ ಬಿಲ್ಡಪ್‌ಗೋಸ್ಕರ ಕಳೆದ 9ವರ್ಷಗಳಲ್ಲಿ ದೇಶದ ಜನರ ಹಿತಾಸಕ್ತಿಯೇ ಬಲಿಯಾಗಿದೆ.

ಇನ್ನಾದರೂ ಜನರಿಗೆ ಒಳ್ಳೆಯದು ಮಾಡಿ.

ಜನರೆಂದರೆ ಅಂಬಾನಿ-ಅದಾನಿಯಲ್ಲ ಎಂದು ನೆನಪಿಟ್ಟುಕೊಳ್ಳಿ.

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 12, 2023
share
Next Story
X