ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್!
ಬೆಂಗಳೂರು: ಟಿಪ್ಪು ಸುಲ್ತಾನರನ್ನು ಕೊಂದರು ಎಂದು ಬಿಜೆಪಿ ಹಾಗೂ ಸಂಘಪರಿವಾರ ಬಿಂಬಿಸುತ್ತಿರುವ ಉರಿಗೌಡ ಹಾಗೂ ನಂಜೇಗೌಡರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.
'ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು' ಎಂಬ ಹೆಸರಿನಲ್ಲಿ ಈ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ 'ಅನೇಕ ಸಂಶೋಧನೆಗಳ ಬಳಿಕ ಸಿಕ್ಕಿದೆ' ಎಂದು ಬರೆದು ಉರಿಗೌಡ ಮತ್ತು ನಂಜೇಗೌಡಗೆ ಎರಡು ಪ್ರತ್ಯೇಕ ಆಧಾರ್ ಕಾರ್ಡ್ ರೀತಿ ಮುದ್ರಿಸಲಾಗಿದೆ.
ಹೆಸರು ಉರಿಗೌಡ ಹಾಗೂ ನಂಜೇಗೌಡ, ತಾಯಿ ಅಶ್ವತ್ಥನಾರಾಯಣ, ತಂದೆ ಸಿ.ಟಿ. ರವಿ, ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ, ಜನ್ಮಸ್ಥಳ ಬಿಜೆಪಿ ಕಚೇರಿ ಮಲ್ಲೇಶ್ವರ ಎಂದು ನಮೂದಿಸಲಾಗಿದೆ. ಆಧಾರ್ ನಂಬರ್ ಅನ್ನು 420 420 420 420 ಎಂದು ಬರೆಯಲಾಗಿದೆ.
ಸದ್ಯ ಈ ಆಧಾರ್ ಕಾರ್ಡ್ ರೀತಿಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೊನೆಗೂ ಪತ್ತೆಯಾದ ಉರಿ ಗೌಡ ನಂಜೇ ಗೌಡ ಆಧಾರ್ ಕಾರ್ಡ್ pic.twitter.com/ZDecGX3rdH
— Radha Avinash (@RadhaAvinash1) March 20, 2023
Next Story